ಮಡಿಕೇರಿ : ಮೂರ್ನಾಡು ಬಳಿಯ ವಾಟೆಕಾಡು ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದಾನಿಗಳ ಸಹಕಾರದಿಂದ ಟೇಬಲ್ ಮತ್ತು ಕುರ್ಚಿಯನ್ನು ಕೊಡುಗೆಯಾಗಿ ನೀಡಲಾಯಿತು.
ಶಾಲೆಯ ಎಲ್ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳ ಪಠ್ಯ ಚಟುವಟಿಕೆಗೆ ಪರಿಕರಗಳ ಬೇಡಿಕೆ ಇರುವುದನ್ನು ಮನಗಂಡ ದಾನಿಗಳಾದ ಇಗ್ಗುತ್ತಪ್ಪ ಬೋರ್ವೆಲ್ಸ್ ಮಾಲೀಕರಾದ ಪ್ರವೀಣ್ ರೈ, ಮಂಜೇಸ್, ಪ್ರವೀಣ್ ಕುಮಾರ್, ನವ್ಯ ಪ್ರವೀಣ್ ರೈ ಅವರು ಅಗತ್ಯವಿರುವ ಟೇಬಲ್ ಹಾಗೂ ಕುರ್ಚಿ ಖರೀದಿಸಿ ವಿತರಿಸಿದರು. ಪರಿಕರಗಳ ಅಗತ್ಯತೆ ಬಗ್ಗೆ ಬಾಳೆಯಡ ದಿವ್ಯಾ ಮಂದಪ್ಪ ಅವರು ದಾನಿಗಳ ಗಮನಕ್ಕೆ ತಂದಿದ್ದರು. ಶಾಲೆ ಮುಖ್ಯ ಶಿಕ್ಷಕಿ ದೇಚಮ್ಮ ಹಾಗೂ ಸಹಶಿಕ್ಷಕರು ಈ ಸಂದರ್ಭ ಇದ್ದರು.



