ವೀರಾಜಪೇಟೆ ಕಾವೇರಿ ಕಾಲೇಜು ಪ್ರಾಂಶುಪಾಲರಾಗಿ ಡಾ.ಕೆ.ಜಿ.ವೀಣಾ ಅಧಿಕಾರ ಸ್ವೀಕಾರ

Share this post :

ವಿರಾಜಪೇಟೆ : ಕಾವೇರಿ ಕಾಲೇಜಿನ ಪದವಿ ವಿಭಾಗದ ನೂತನ ಪ್ರಾಂಶುಪಾಲೆಯಾಗಿ ಡಾ. ಕುಪ್ಪಂಡ ವೀಣಾ ಅಧಿಕಾರ ವಹಿಸಿಕೊಂಡರು. ಬೆನೆಡಿಕ್ಟ್ ಆರ್ ಸಲ್ಡಾನರ ನಿವೃತ್ತಿಯಿಂದ ತೆರವಾಗಿದ್ದ ಹುದ್ದೆಗೆ ಆಡಳಿತ ಮಂಡಳಿ ಆದೇಶದ ಮೇರೆಗೆ ಅಧಿಕಾರ ವಹಿಸಿಕೊಂಡಿದ್ದಾರೆ. ವೀಣಾರವರು ಈ ಹಿಂದೆ ಆಂಗ್ಲ ವಿಭಾಗದ ಉಪನ್ಯಾಸಕರಾಗಿ, ಮುಖ್ಯಸ್ಥರಾಗಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಓ.ಎಸ್ ಹಾಗೂ ಕೊಡಗು ವಿಶ್ವವಿದ್ಯಾಲಯದ ಬಿ.ಓ.ಇ ಆಗಿ ಸೇವೆ ಸಲ್ಲಿಸಿರುತ್ತಾರೆ.
ಇದರೊಂದಿಗೆ ಕಾವೇರಿ ಕಾಲೇಜಿನ ಐ.ಕ್ಯೂ.ಎ.ಸಿ. ಸಂಯೋಜಕರಾಗಿ ಐದು ವರ್ಷ ಸೇವೆ ಸಲ್ಲಿಸಿರುತ್ತಾರೆ. ಕೊಡವ ಭಾಷೆಯ ಕವಿತೆಗಳನ್ನು ಆಂಗ್ಲ ಭಾಷೆಗೆ ಭಾಷಾಂತರವನ್ನು ಮಾಡಿದ್ದಾರೆ. ಇವರು ವಿರಾಜಪೇಟೆ ಸಮೀಪದ ನಾಂಗಾಲ ಗ್ರಾಮದ ವಕೀಲರಾದ ಕುಪ್ಪಂಡ ರವೀಂದ್ರರವರ ಪತ್ನಿ.

coorg buzz
WhatsApp Image 2026-08-11 at 16.11.22