ಜನಪರ ಕೆಲಸ ಮಾಡುತ್ತಿದ್ದರೂ ನನ್ನ ವಿರುದ್ಧ ವಿಪಕ್ಷದಿಂದ ಕ್ಷುಲ್ಲಕ ಆರೋಪ – ಎ.ಎಸ್.‌ ಪೊನ್ನಣ್ಣ ಬೇಸರ

ಮಡಿಕೇರಿ : ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ದುರಸ್ತಿ ವಿಚಾರದಲ್ಲಿ ನಿರಂತರ ಕಾಮಗಾರಿ ಆಗುತ್ತಿದೆ. ಅನೇಕ ಕಡೆ ಉತ್ತಮ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ವಿಪಕ್ಷಗಳು ಹಾಗೂ ಕೆಲವವರು ಕೈಯ್ಯಲ್ಲಿ ಮೊಬೈಲ್‌ ಇದೆ ಎಂಬ ಕಾರಣಕ್ಕೆ ಸಣ್ಣ ಗುಂಡಿಗಳನ್ನು ದೊಡ್ಡದಾಗಿ ವೈಭವೀಕರಿಸಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವೀರಾಜಪೇಟೆ ವಿಧಾಸಭಾ ಕ್ಷೇತ್ರದ ಶಾಸಕ ಎ.ಎಸ್.‌ ಪೊನ್ನಣ್ಣ ಹೇಳಿದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ […]