ಮಂಗಳೂರು ವಿವಿ ಬಿಕಾಂ ಪಠ್ಯದಲ್ಲಿ ರಮ್ಯಾ ಮೂರ್ನಾಡು ಅವರ ಕವನ

ಮಡಿಕೇರಿ : 2026ರ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಥಮ ಬಿಕಾಂ ವಾಣಿಜ್ಯ ಸಿರಿ ಪಠ್ಯ ಪುಸ್ತಕಕ್ಕೆ ಕೊಡಗಿನ ರಮ್ಯ ಮೂರ್ನಾಡು ಅವರು ಬರೆದಿರುವ ಕವಿತೆ ಆಯ್ಕೆಯಾಗಿದೆ. ಮಡಿಕೇರಿ ತಾಲೂಕಿನ ಮೂರ್ನಾಡು ನಿವಾಸಿಯಾದ ರಮ್ಯಾ, ಪ್ರಸ್ತುತ ಎಮ್ಮೆಮಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಬರೆದಿರುವ ʼಹೇಳಲು ನನಗೂ ಒಂದು ಕತೆಯಿದೆʼ ಕವನವನ್ನು ವಾಣಿಜ್ಯ ಸಿರಿ ಪಠ್ಯ ಪುಸ್ತಕದಲ್ಲಿ ಅಳವಡಿಸಲಾಗಿದೆ. ಓದು, ಬರಹ, ಚಾರಣ ಹವ್ಯಾಸವಿರುವ ಇವರು ಈಗ ಯುವ ಕವಯತ್ರಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇವರ […]