ಚುನಾವಣಾ ರಾಜಕಾರಣಕ್ಕೆ ಹಳ್ಳಿಹಕ್ಕಿ ಗುಡ್‌ ಬೈ – 50 ಕೋಟಿ ಖರ್ಚು ಮಾಡುವ ಶಕ್ತಿ ಇಲ್ಲ ಎಂದ ವಿಶ್ವನಾಥ್..!

Share this post :

ಮೈಸೂರು : ವಿಧಾನ ಪರಿಷತ್‌ ಸದಸ್ಯ, ಮಾಜಿ ಸಂಸದ ಎಚ್.‌ ವಿಶ್ವನಾಥ್‌ ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಈಗಿನ ರಾಜಕಾರಣ ಬದಲಾಗಿದೆ. ಈ ಹಿಂದೆ ನಾನು ಚುನಾವಣೆ ಎದುರಿಸಿದ್ದಾಗ ಜನರೇ ಹಣ ನೀಡಿ ಗೆಲ್ಲಿಸಿದ್ದರು. ಆದರೆ ಈಗ ಹಣ ಕೊಟ್ಟು ಚುನಾವಣೆ ಎದುರಿಸುವ ಪರಿಸ್ಥಿತಿ ಇದೆ. 50 ಕೋಟಿ ರೂ. ಖರ್ಚು ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸುವ ಶಕ್ತಿ ನನ್ನಲ್ಲಿಲ್ಲ. ಹೀಗಾಗಿ ಮುಂದೆ ಯಾವುದೇ ಚುನಾವಣೆಯಲ್ಲೂ ನಾನು ಸ್ಪರ್ಧಿಸುವುದಿಲ್ಲ ಎಂದು ಹೇಳಿದರು.
ಚುನಾವಣಾ ರಾಜಕಾರಣಕ್ಕೆ ಮಾತ್ರ ವಿದಾಯ ಹೇಳಿದ್ದೇನೆ. ಆದರೆ ರಾಜಕಾರಣದಲ್ಲಿ ಇರುತ್ತೇನೆಂದು ಪ್ರತಿಕ್ರಿಯಿಸಿದರು.

coorg buzz
WhatsApp Image 2026-08-11 at 16.11.22