ಮಡಿಕೇರಿ : ನಾಪೋಕ್ಲು ಹಿಂದು ಜನಜಾಗೃತಿ ಸಮಿತಿ ವತಿಯಿಂದ ʼಹಿಂದು ಜನಜಾಗೃತಿ ಸಭೆʼ ಏಪ್ರಿಲ್ 01ರಂದು ನಡೆಯಲಿದೆ.
ಅಂದು ಬೆಳಗ್ಗೆ 10 ಗಂಟೆಗೆ ಹಳೆ ತಾಲೂಕು ಜಂಕ್ಷನ್ನಿಂದ ಬೃಹತ್ ಜಾಥಾ ಹೊರಡಲಿದೆ. ಬಳಿಕ ಸಭಾ ಕಾರ್ಯಕ್ರಮ ಮಾರುಕಟ್ಟೆ ಆವರಣದಲ್ಲಿ ನಡೆಯಲಿದೆ. ತಿಂಗಳ ಹಿಂದೆ ಹಿಂದು ಸಂಗಮ ಕಾರ್ಯಕ್ರಮಕ್ಕೂ ಮುನ್ನ ದಿನ ಹಿಂದು ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಗಡಿಪಾರು ಮಾಡುವುದು. ಹಿಂದು ವಿರೋಧಿ ಸಮಾಜಘಾತುಕರ ವಿರುದ್ಧ ಜಾಗೃತಿ ಮೂಡಿಸುವುದು. ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಆರ್ಥಿಕ ಜಿಹಾದ್, ಜನಸಂಖ್ಯಾ ಜಿಹಾದ್ ವಿರುದ್ಧ ಜಾಗೃತಿ. ಬಾಂಗ್ಲಾದೇಶದಿಂದ ಬಂದಿರುವ ಅಕ್ರಮ ವಲಸಿಗರ ಗಡಿಪಾಡಿಗೆ ಆಗ್ರಹ. ಹಿಂದು ವಿರೋದಿ, ರಾಷ್ಟ್ರ ವಿರೋದಿ ಕೃತ್ಯಗಳ ಖಂಡನೆ, ಜಾಗೃತ, ಸಂಘಟಿತ, ಸುರಕ್ಷಿತ ಹಿಂದು ಸಮಾಜ ನಿರ್ಮಾಣದ ಉದ್ದೇಶದೊಂದಿಗೆ ಕಾರ್ಯಕ್ರಮ ಆಯೋಜನೆಗೊಂಡಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



