ಮಾರ್ನಿಂಗ್ ಸ್ಟಾರ್ ತಂಡದಲ್ಲಿ ತರಬೇತಿ ಪಡೆದು ಸೇನೆಗೆ ಆಯ್ಕೆಯಾದ 05 ತರುಣರಿಗೆ ಗೌರವದ ಬೀಳ್ಕೊಡುಗೆ

ಮಡಿಕೇರಿ : ನಗರದ ಮಾರ್ನಿಂಗ್ ಸ್ಟಾರ್ ತಂಡದಿಂದ ತರಬೇತಿ ಪಡೆದ ಐವರು ಯುವಕರು ಅಗ್ನಿವೀರ್ ಯೋಜನೆ ಮೂಲಕ ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದವರಿಗೆ ಅಭಿನಂದನೆ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ ಮಡಿಕೇರಿಯಲ್ಲಿ ನಡೆಯಿತು. ಶುಕ್ರವಾರ ಸಂಜೆ ನಗರದ ಹೋಟೆಲ್ ಸಮುದ್ರ ಸಭಾಂಗಣದಲ್ಲಿ ತಂಡದ ಪ್ರಮುಖರಾದ ಸುರೇಶ್ ರೈ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ಸೇನೆಗೆ ಆಯ್ಕೆಯಾಗಿರುವ ಎಸ್.ವಿ. ಮೋಕ್ಷಿತ್ ಭಾಗಮಂಡಲ, ಡಿ.ಎಚ್. ಆಕಾಶ್ ಭಾಗಮಂಡಲ, ಎಚ್.ಆರ್. ಯಶ್ವಂತ್ ಕೂಡಿಗೆ, ಬಿ.ಜಿ. ಹರ್ಷಿತ್ ಚೆಂಬು, ಬಿ.ಎಸ್. ತಿಲಕ್ ಮಡಿಕೇರಿ ಅವರನ್ನು ಶಾಲು […]