ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಂಚೂಣಿ ಘಟಕವಾದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಜ್ಯ ಕೋರ್ ಕಮಿಟಿಯಲ್ಲಿ ಕೊಡಗು ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ತೆನ್ನಿರ ಮೈನಾ (Thennira Maheena) ಸದಸ್ಯರಾಗಿ ನೇಮಕವಾಗಿದ್ದಾರೆ.
ಕಳೆದ ಎರಡು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಜವಾಬ್ದಾರಿ ಮತ್ತು ಹೊಣೆಗಾರಿಕೆ ಹೊತ್ತಿದ್ದ ತೆನ್ನಿರ ಮೈನಾ ರವರನ್ನು ಕೋರ್ ಕಮಿಟಿಗೆ ನೇಮಕ ಮಾಡುವಂತೆ ಸಂಘಟನೆಯ ರಾಜ್ಯಾಧ್ಯಕ್ಷರಾದ ವಿಜಯ್ ಸಿಂಗ್ ರವರು ಎ.ಐ.ಸಿ.ಸಿ ಗೆ ಶಿಫಾರಸ್ಸು ಮಾಡಿದ್ದರು. ವಿಜಯ್ ಸಿಂಗ್ ರವರ ಶಿಫಾರಸ್ಸು ನ್ನು ಪುರಸ್ಕರಿಸಿದ ಸಂಘಟನೆಯ ಎ.ಐ.ಸಿ.ಸಿ ಅಧ್ಯಕ್ಷರಾದ ಹರ್ಷವರ್ಧನ್ ಸಕ್ಪಾಲ್ ರವರು ಕರ್ನಾಟಕ ರಾಜ್ಯದಲ್ಲಿ ತೆನ್ನಿರ ಮೈನಾ ಸೇರಿದಂತೆ 15 ಮುಖಂಡರನ್ನು ರಾಜ್ಯ ಕೋರ್ ಸಮಿತಿಯ ಸದಸ್ಯರನ್ನಾಗಿ ನೇಮಕಾತಿ ಮಾಡಿ ಆದೇಶ ಹೊರಡಿಸಿದ್ದಾರೆ.