✍️ ಬರಹ – ಕಿಶೋರ್ ರೈ ಕತ್ತಲೆಕಾಡು

ಕೊಡಗು ಜಿಲ್ಲೆಯಲ್ಲಿ ಹಾಕಿ ಕ್ರೀಡೆಯ ಇತಿಹಾಸದಲ್ಲಿ ಅನೇಕ ಖ್ಯಾತನಾಮರು ತಮ್ಮ ಛಾಪು ಮೂಡಿಸಿದ್ದಾರೆ. ಇಂದಿಗೂ ಹಲವು ಉದಯೋನ್ಮುಖ ಪ್ರತಿಭೆಗಳು ಹಾಕಿ (Hockey) ಕ್ರೀಡೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಕೊಡಗಿನ ಕ್ರೀಡಾ ಗತವೈಭವದ ಉಳಿವಿಗಾಗಿ ಕೊಡುಗೆ ನೀಡುತ್ತಿದ್ದಾರೆ. ಕ್ರೀಡಾಪಟುಗಳಂತೆಯೇ ಕ್ರೀಡಾ ವೀಕ್ಷಕ ವಿವರಣೆಗಾರರಿಗೂ ಇಂದಿನ ದಿನದಲ್ಲಿ ಹೆಚ್ಚಿನ ಬೇಡಿಕೆಯಿದೆ. ಮೈದಾನದಲ್ಲಿ ಆಟಗಾರರು ಆಡಿ ರಂಜಿಸಿದರೆ, ಆಟದ ವೈಭವ ಮತ್ತು ಅದರ ಸೊಗಡನ್ನು ತಮ್ಮ ಮಾತಿನ ಕೌಶಲ್ಯದಿಂದ ಮತ್ತಷ್ಟು ಕೌತುಕಭರಿತವಾಗಿ ಪ್ರೇಕ್ಷಕರಿಗೆ ತಲುಪಿಸುವ ಕಾರ್ಯವನ್ನು ವೀಕ್ಷಕ ವಿವರಣೆಗಾರರು ಮಾಡುತ್ತಾರೆ.
ಇಂತ ವೀಕ್ಷಕ ವಿವರಣೆ ಕ್ಷೇತ್ರದಲ್ಲಿ ಯುವ ಪ್ರತಿಭೆಯೊಬ್ಬ ಸದ್ದು ಮಾಡುತ್ತಿದ್ದಾನೆ. ಮಡಿಕೇರಿ ನಿವಾಸಿ, 17 ರ್ಷ ಪ್ರಾಯದ ಚೈಯ್ಯಂಡ (Cheyyanda) ಬನೀತ್ ಬೋಜಣ್ಣ ಆ ಭರವಸೆಯ ಧ್ವನಿ. ಇತ್ತೀಚೆಗೆ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಕೊಡವ ಕೌಟುಂಬಿಕ ತಂಡಗಳ ನಡುವಿನ ಮುದ್ದಂಡ ಹಾಕಿ ನಮ್ಮೆಯಲ್ಲಿ ವೀಕ್ಷಕ ವಿವರಣೆಗಾರರ ತಂಡದಲ್ಲಿದ್ದ ಕಿರಿಯ ಪ್ರತಿಭೆ ಈತ. ಅನುಭವಿ ವಿವರಣೆಗಾರರ ನಡುವೆ ಈತನ ಕೌಶಲ್ಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ.
ಕಾಮೆಂಟರಿ ಕ್ಷೇತ್ರದಲ್ಲಿ ಅನುಭವಿಗಳಾದ ಚೆಪ್ಪುಡೀರ ಕಾರ್ಯಪ್ಪ, ಮಾಳೇಟಿರ ಶ್ರೀನಿವಾಸ್, ಚೋಕಿರ ಅನಿತಾ, ಬೊಟ್ಟೋಳಂಡ ಸೌಮ್ಯ, ಮೂಡೇರ ಹರೀಶ್ ಕಾಳಯ್ಯ, ಕುಲ್ಲೇಟಿರ ಅರುಣ್ ಬೇಬ, ಅಜ್ಜೇಟಿರ ವಿಕ್ರಮ್ ಅವರ ಜೊತೆಗೆ ಚೈಯ್ಯಂಡ ಬನೀತ್ ಬೋಜಣ್ಣ ತಮ್ಮ ಮಾತಿನ ಮೋಡಿಯಿಂದ ರಂಜಿಸಿದ್ದಾನೆ. ಈ ಯುವ ಪ್ರತಿಭೆಯ ವಾಕ್ಚಾತುರ್ಯ ಈಗ ಎಲ್ಲರನ್ನೂ ಸೆಳೆಯುತ್ತಿದೆ. ಯಾರೀತ ಯಂಗ್ ಟ್ಯಾಲೆಂಟ್ ಅಂತ ಹಾಕಿ ಪಂದ್ಯಾವಳಿ ವೀಕ್ಷಣೆಗೆ ಬರುವ ಕ್ರೀಡಾಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದರು.

ಹಾಕಿ ಪಂದ್ಯಾವಳಿಯ ವೀಕ್ಷಕ ವಿವರಣೆ ನೀಡುವುದು ಸುಲಭದ ವಿಚಾರವಲ್ಲ. ಹಲವು ಆಯಾಮದಲ್ಲಿ ಜ್ಞಾನವನ್ನು ವಿವರಣೆಗಾರ ಹೊಂದಿರಬೇಕಾಗುತ್ತದೆ. ಹಾಕಿಯ ಬಗ್ಗೆ ಸಂಪೂರ್ಣ ಮಾಹಿತಿ, ತಾಂತ್ರಿಕ ವಿಚಾರಗಳ ಬಗ್ಗೆ ಅರಿವು, ಕ್ರೀಡೆಯಲ್ಲಿ ಬಳಸುವ ತಾಂತ್ರಿಕ ಪದಗಳು, ಆಟಗಾರರು ಮತ್ತು ತಂಡಗಳ ಮಾಹಿತಿ, ದಾಖಲೆಗಳು ಹೀಗೆ ಹಲವು ವಿಚಾರಗಳ ಬಗ್ಗೆ ಅಧ್ಯಯನ ವೀಕ್ಷಕ ವಿವರಣೆಗಾರನಿಗೆ ಅಗತ್ಯ. ಈ ವಿಚಾರದಲ್ಲಿ ಬನೀತ್ ತಾಳ್ಮೆ ಹಾಗೂ ಆಸಕ್ತಿಯಿಂದ ಅಧ್ಯಯನ ಮಾಡಿ ವಿವರಣೆಗಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾನೆ.
ತಾಂತ್ರಿಕ ಜ್ಞಾನವಿದ್ದರಷ್ಟೇ ಸಾಲದು. ಆಕರ್ಷಕ ಧ್ವನಿ, ಸಂದರ್ಭಕ್ಕೆ ತಕ್ಕನಾಗಿ ಏರಿಳಿತ, ಸ್ಪಷ್ಟ ಉಚ್ಛರಣೆಯೂ ಆತನಲ್ಲಿರಬೇಕಾಗುತ್ತದೆ. ಈ ವಿಚಾರದಲ್ಲೂ ಬನೀತ್ ತನ್ನನ್ನು ಕರಗತಗೊಳಿಸಿಕೊಂಡಿರುವುದು ವಿಶೇಷ. ಇಂದಿನ ದಿನದಲ್ಲಿ ಜೋರಾಗಿ ಕಿರುಚುತ್ತಾ ಮೈಕ್ನಲ್ಲಿ ಅಬ್ಬರಿಸುವುದೇ ವೀಕ್ಷಕ ವಿವರಣೆಗಾರನ ಲಕ್ಷಣ ಅಂತ ಯುವ ಪ್ರತಿಭೆಗಳು ಅದನ್ನೇ ಅನುಸರಿಸುವುದನ್ನು ನಾವು ಗಮನಿಸಬಹುದು. ಆದರೆ ಬನೀತ್ ಈ ವಿಚಾರದಲ್ಲಿ ಭಿನ್ನ. ನುರಿತ ವೀಕ್ಷಕ ವಿವರಣೆಗಾರನಾಗಲು ಅಗತ್ಯ ಗುಣಲಕ್ಷಣಗಳೇನೇನು ಇರಬೇಕೋ ಅದನ್ನೆಲ್ಲಾ ಅಧ್ಯಯನ ಮಾಡಿಕೊಂಡು ಮುಂದಡಿಯಿಡುತ್ತಿದ್ದಾನೆ. ಹಿರಿಯರ ಅನುಭವ, ಮಾರ್ದಗರ್ಶನವನ್ನು ಪಡೆಯುತ್ತಾ ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾನೆ. ಆ ಮೂಲಕ ಹಾಕಿ ಕಾಮೆಂಟರಿ ಕ್ಷೇತ್ರಕ್ಕೆ ತಾನೊಬ್ಬ ನುರಿತ ಪ್ರತಿಭೆಯಾಗುವ ಎಲ್ಲಾ ಮುನ್ಸೂಚನೆಯನ್ನು ಎಳೆಯ ವಯಸ್ಸಿನಲ್ಲೇ ನೀಡಿದ್ದಾನೆ.
ಬನೀತ್ ವೀಕ್ಷಕ ವಿವರಣೆ ನೀಡಲು ಆರಂಭಿಸಿದ್ದು ತನ್ನ 16ನೇ ವಯಸ್ಸಿನಿಂದ. ನಾಪೋಕ್ಲುವಿನಲ್ಲಿ ನಡೆದ ಕುಂಡ್ಯೋಳಂಡ ಹಾಕಿ ನಮ್ಮೆಯಲ್ಲಿ ಒಂದು ತಿಂಗಳ ಕಾಲ ನಿರಂತರವಾಗಿ ತೊಡಗಿಸಿಕೊಂಡು ಮೆಚ್ಚುಗೆ ಗಳಿಸಿದ್ದ. ಅತಿ ಹೆಚ್ಚು ತಂಡಗಳು ಪಾಲ್ಗೊಂಡ ಟೂರ್ನಮೆಂಟ್ ಎಂಬ ಗಿನ್ನಿಸ್ ದಾಖಲೆಗೂ ಪಾತ್ರವಾಗಿತ್ತು. ಅಲ್ಲಿ ಸಿಕ್ಕ ಯಶಸ್ಸು ಈ ಬಾರಿ ಮುದ್ದಂಡ ಹಾಕಿ ನಮ್ಮೆಯ ವೀಕ್ಷಕ ವಿವರಣೆಗಾರರ ಬಳಗದಲ್ಲಿಯೂ ಅವಕಾಶ ಮಾಡಿಕೊಟ್ಟಿತ್ತು.

ತ್ರಿಭಾಷೆಯಲ್ಲಿ ಹಿಡಿತ..!
ಈ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವವರಿಗೆ ಬಹುಭಾಷೆಯ ಜ್ಞಾನವಿರಬೇಕಾಗುತ್ತದೆ. ಆ ವಿಚಾರದಲ್ಲೂ ಬನೀತ್ ಮುಂದಿದ್ದಾನೆ. ಕನ್ನಡ, ಕೊಡವ, ಇಂಗ್ಲೀಷ್ ಈ ಮೂರು ಭಾಷೆಯಲ್ಲಿ ಹಿಡಿತ ಹೊಂದಿದ್ದಾನೆ. ಹೀಗಾಗಿ ಕೊಡವ ಕೌಟುಂಬಿಕ ಟೂರ್ನಿ ಮಾತ್ರವಲ್ಲದೆ ಜಿಲ್ಲೆಯ ವಿವಿಧೆಡೆ ಹಾಗೂ ನೆರೆಯ ಜಿಲ್ಲೆಗಳಲ್ಲಿ ನಡೆದ ಪ್ರತಿಷ್ಠಿತ ಟೂರ್ನಿಯಲ್ಲಿಯೂ ಭಾಗವಹಿಸಿ ಸೈ ಎನಿಸಿಕೊಂಡಿದ್ದಾನೆ.
ಈತ ಮಡಿಕೇರಿಯ ಉದ್ಯಮಿ ಚೈಯ್ಯಂಡ ಸತ್ಯ ಗಣಪತಿ ಹಾಗೂ ಪದ್ಮಾ ದಂಪತಿಯ ಕಿರಿಯ ಪುತ್ರ. ಸಂತ ಜೋಸೇಫರ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ವ್ಯಾಸಂಗ ಪೂರೈಸಿದ್ದಾನೆ. ಮುಂದೆ ಇಂಜಿನಿಯರಿಂಗ್ ವ್ಯಾಸಂಗ ಮಾಡಲು ಸಜ್ಜಾಗಿದ್ದು, ಬಳಿಕ ಸೇನೆಗೆ ಸೇರಬೇಕೆಂಬ ಮಹದಾಸೆಯನ್ನು ಹೊಂದಿದ್ದಾರೆ. ಪ್ರೌಢಶಾಲಾ ಅವಧಿಯಲ್ಲಿ ಎನ್ಸಿಸಿಯಲ್ಲಿ ತೊಡಗಿಸಿಕೊಂಡಿದ್ದ. ತಾನು ಸೇನೆಗೆ ಸೇರಲು ಬೇಕಾದ ತಯಾರಿಯನ್ನು ಶಾಲಾ ಜೀವನದಿಂದಲೇ ಮಾಡಿಕೊಂಡು ಬಂದಿರುವ ಬನೀತ್, ಮುಂದೆ ಸೇನೆಗೆ ಸೇರಿ ದೇಶ ಸೇವೆಗೆ ಅವಕಾಶ ಸಿಗುತ್ತದೆ ಎಂಬ ಅಚಲ ವಿಶ್ವಾಸದಲ್ಲಿದ್ದಾನೆ.
ಪೋಷಕರು ಕೂಡಾ ಮಗನ ಆಸೆಗೆ ನೀರೆರೆಯುತ್ತಾ ಬಂದಿದ್ದಾರೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬೇಕೆಂದು ಹಂಬಲಿಸುವ ಪೋಷಕರ ನಡುವೆ ಬನೀತ್ ಪೋಷಕರು ಭಿನ್ನವಾಗಿ ಕಾಣಿಸುತ್ತಾರೆ. ಆತನ ಆಸೆ, ಆಕಾಂಕ್ಷೆಯನ್ನ ಅರಿತು ಅದಕ್ಕೆ ಪ್ರೋತ್ಸಾಹವನ್ನು ಮೊದಲಿನಿಂದಲೂ ನೀಡುತ್ತಿದ್ದಾರೆ. ಶೈಕ್ಷಣಿಕವಾಗಿ ಅಂಕಗಳಿಕೆ ವಿಚಾರದಲ್ಲಿ ಯಾವತ್ತೂ ಒತ್ತಡ ಹೇರಿದವರಲ್ಲ. ಇದರ ಪರಿಣಾಮ ಬನೀತ್ ಕಾಮೆಂಟರಿ ಕ್ಷೇತ್ರದಲ್ಲಿ ಪಕ್ವತೆಯನ್ನು ಬೆಳೆಸಿಕೊಳ್ಳುವುದಕ್ಕೆ ಅನುಕೂಲವಾಗಿದೆ.

ಬನೀತ್ ಹೇಳೋದೇನು…
ಬಾಲ್ಯದಿಂದಲೇ ವೇದಿಕೆ ಕಾರ್ಯಕ್ರಮಗಳ ನಿರೂಪಣೆಯಲ್ಲಿ ಆಸಕ್ತಿ ಇತ್ತು. ಹಾಕಿ ಬಗ್ಗೆಯೂ ಒಲವು ಹೊಂದಿದೆ. ಅಜ್ಜಿ ಮತ್ತು ಅಪ್ಪನೂ ಮಾತುಗಾರಿಕೆಯಲ್ಲಿ ಪರಿಣಿತರಿದ್ದರು. ಹಾಗಾಗಿ ಅವರ ಪ್ರಭಾವವೂ ನನ್ನ ಮೇಲೆ ಇದೆ. ಕುಂಡ್ಯೋಳಂಡ ಹಾಕಿ ನಮ್ಮೆಯಲ್ಲಿ ಅಚಾನಕ್ ಆಗಿ ವೀಕ್ಷಕ ವಿವರಣೆ ನೀಡುವ ಅವಕಾಶ ಸಿಕ್ಕಿತ್ತು. ಪ್ರಮುಖ ಮೈದಾನದಲ್ಲೇ ಕಾಮೆಂಟರಿಗೆ ಅವಕಾಶ ಕೊಟ್ಟಿದ್ದರು. ಅಲ್ಲಿ ಆದ ಅನುಭವ ಮತ್ತು ನನ್ನ ವೀಕ್ಷಕ ವಿವರಣೆಯನ್ನು ಗಮನಿಸಿದ ಹಿರಿಯರು ಮುದ್ದಂಡ ಹಾಕಿ ನಮ್ಮೆಯಲ್ಲಿಯೂ ಅವಕಾಶ ಮಾಡಿಕೊಟ್ಟರು. ಸಾಂಪ್ರದಾಯಿಕ ಶೈಲಿಯಲ್ಲದೆ, ಹೊಸತನವನ್ನು ಬೆರೆಸಿಕೊಂಡು(ಕಾಮೆಂಟರಿಯ ಗೌರವಕ್ಕೆ ಧಕ್ಕೆಯಾಗದ ರೀತಿ) ಯುವ ಸಮೂಹವನ್ನು ಆಕರ್ಷಿಸುವ ರೀತಿಯಲ್ಲಿ ಯಾವ ರೀತಿ ವೀಕ್ಷಕ ವಿವರಣೆ ನೀಡಬಹುದೆಂಬುದನ್ನು ಈ ಬಾರಿಯ ಹಾಕಿ ನಮ್ಮೆಯಲ್ಲಿ ಕಲಿತಿದ್ದೇನೆ. ತಂಡದಲ್ಲಿದ್ದ ಹಿರಿಯ ವೀಕ್ಷಕ ವಿವರಣೆಗಾರರೆಲ್ಲರು ವಿವಿಧ ರೀತಿಯಲ್ಲಿ ಸಲಹೆ, ಸೂಚನೆಗಳನ್ನ ಕೊಟ್ಟರು. ತಪ್ಪುಗಳನ್ನ ತಿದ್ದಿ ಯಾವ ರೀತಿಯಲ್ಲಿ ಮುಂದುವರೆಯಬೇಕೆಂದು ಮಾರ್ಗದರ್ಶನ ಮಾಡಿದರು. ಹಾಕಿಯ ಕುರಿತಾದ ಪುಸ್ತಕಗಳನ್ನು ಓದುತ್ತಾ, ನಿಯಮಗಳ ಬಗ್ಗೆಯೂ ನಿರಂತರವಾಗಿ ತಿಳಿದುಕೊಳ್ಳುತ್ತಿದ್ದೇನೆ. ಆಟಗಾರರ ಬಗ್ಗೆಯೂ ಸಾಕಷ್ಟು ಅಧ್ಯಯನ ಮಾಡಿದ್ದು, ಕುತೂಹಲಕಾರಿ ಅಂಶಗಳನ್ನು ನೋಟ್ ಮಾಡಿಕೊಳ್ಳುತ್ತಿದ್ದೇನೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದಾಗ ಈಗ ಸಾಕಷ್ಟು ಬದಲಾವಣೆ ನನ್ನಲ್ಲಿ ಆಗಿದೆ. ಮುಂದೆ ಸಿಗುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಕೊಡಗಿನ ಹೆಮ್ಮೆ ಆಗಿರುವ ಹಾಕಿ ಕ್ರೀಡೆಗೆ ನನ್ನಿಂದಾಗುವ ಸೇವೆಯನ್ನು ನೀಡಬೇಕೆಂದಿದ್ದೇನೆ. ಯಾವ ಟೂರ್ನಮೆಂಟ್ ಅದರೂ ಅವಕಾಶ ಸಿಕ್ಕಿದರೆ ಖಂಡಿತವಾಗಿಯೂ ಬಳಸಿಕೊಳ್ಳುತ್ತೇನೆ.
✍️ ಬರಹ – ಕಿಶೋರ್ ರೈ ಕತ್ತಲೆಕಾಡು

ಹಾಕಿ ವೀಕ್ಷಕ ವಿವರಣೆಗೆ ಭರವಸೆಯ ಧ್ವನಿ, ಚೈಯ್ಯಂಡ ʼಬನಿʼ
Share this post :
✍️ ಬರಹ – ಕಿಶೋರ್ ರೈ ಕತ್ತಲೆಕಾಡು
ಕೊಡಗು ಜಿಲ್ಲೆಯಲ್ಲಿ ಹಾಕಿ ಕ್ರೀಡೆಯ ಇತಿಹಾಸದಲ್ಲಿ ಅನೇಕ ಖ್ಯಾತನಾಮರು ತಮ್ಮ ಛಾಪು ಮೂಡಿಸಿದ್ದಾರೆ. ಇಂದಿಗೂ ಹಲವು ಉದಯೋನ್ಮುಖ ಪ್ರತಿಭೆಗಳು ಹಾಕಿ (Hockey) ಕ್ರೀಡೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಕೊಡಗಿನ ಕ್ರೀಡಾ ಗತವೈಭವದ ಉಳಿವಿಗಾಗಿ ಕೊಡುಗೆ ನೀಡುತ್ತಿದ್ದಾರೆ. ಕ್ರೀಡಾಪಟುಗಳಂತೆಯೇ ಕ್ರೀಡಾ ವೀಕ್ಷಕ ವಿವರಣೆಗಾರರಿಗೂ ಇಂದಿನ ದಿನದಲ್ಲಿ ಹೆಚ್ಚಿನ ಬೇಡಿಕೆಯಿದೆ. ಮೈದಾನದಲ್ಲಿ ಆಟಗಾರರು ಆಡಿ ರಂಜಿಸಿದರೆ, ಆಟದ ವೈಭವ ಮತ್ತು ಅದರ ಸೊಗಡನ್ನು ತಮ್ಮ ಮಾತಿನ ಕೌಶಲ್ಯದಿಂದ ಮತ್ತಷ್ಟು ಕೌತುಕಭರಿತವಾಗಿ ಪ್ರೇಕ್ಷಕರಿಗೆ ತಲುಪಿಸುವ ಕಾರ್ಯವನ್ನು ವೀಕ್ಷಕ ವಿವರಣೆಗಾರರು ಮಾಡುತ್ತಾರೆ.
ಇಂತ ವೀಕ್ಷಕ ವಿವರಣೆ ಕ್ಷೇತ್ರದಲ್ಲಿ ಯುವ ಪ್ರತಿಭೆಯೊಬ್ಬ ಸದ್ದು ಮಾಡುತ್ತಿದ್ದಾನೆ. ಮಡಿಕೇರಿ ನಿವಾಸಿ, 17 ರ್ಷ ಪ್ರಾಯದ ಚೈಯ್ಯಂಡ (Cheyyanda) ಬನೀತ್ ಬೋಜಣ್ಣ ಆ ಭರವಸೆಯ ಧ್ವನಿ. ಇತ್ತೀಚೆಗೆ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಕೊಡವ ಕೌಟುಂಬಿಕ ತಂಡಗಳ ನಡುವಿನ ಮುದ್ದಂಡ ಹಾಕಿ ನಮ್ಮೆಯಲ್ಲಿ ವೀಕ್ಷಕ ವಿವರಣೆಗಾರರ ತಂಡದಲ್ಲಿದ್ದ ಕಿರಿಯ ಪ್ರತಿಭೆ ಈತ. ಅನುಭವಿ ವಿವರಣೆಗಾರರ ನಡುವೆ ಈತನ ಕೌಶಲ್ಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ.
ಕಾಮೆಂಟರಿ ಕ್ಷೇತ್ರದಲ್ಲಿ ಅನುಭವಿಗಳಾದ ಚೆಪ್ಪುಡೀರ ಕಾರ್ಯಪ್ಪ, ಮಾಳೇಟಿರ ಶ್ರೀನಿವಾಸ್, ಚೋಕಿರ ಅನಿತಾ, ಬೊಟ್ಟೋಳಂಡ ಸೌಮ್ಯ, ಮೂಡೇರ ಹರೀಶ್ ಕಾಳಯ್ಯ, ಕುಲ್ಲೇಟಿರ ಅರುಣ್ ಬೇಬ, ಅಜ್ಜೇಟಿರ ವಿಕ್ರಮ್ ಅವರ ಜೊತೆಗೆ ಚೈಯ್ಯಂಡ ಬನೀತ್ ಬೋಜಣ್ಣ ತಮ್ಮ ಮಾತಿನ ಮೋಡಿಯಿಂದ ರಂಜಿಸಿದ್ದಾನೆ. ಈ ಯುವ ಪ್ರತಿಭೆಯ ವಾಕ್ಚಾತುರ್ಯ ಈಗ ಎಲ್ಲರನ್ನೂ ಸೆಳೆಯುತ್ತಿದೆ. ಯಾರೀತ ಯಂಗ್ ಟ್ಯಾಲೆಂಟ್ ಅಂತ ಹಾಕಿ ಪಂದ್ಯಾವಳಿ ವೀಕ್ಷಣೆಗೆ ಬರುವ ಕ್ರೀಡಾಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದರು.
ಹಾಕಿ ಪಂದ್ಯಾವಳಿಯ ವೀಕ್ಷಕ ವಿವರಣೆ ನೀಡುವುದು ಸುಲಭದ ವಿಚಾರವಲ್ಲ. ಹಲವು ಆಯಾಮದಲ್ಲಿ ಜ್ಞಾನವನ್ನು ವಿವರಣೆಗಾರ ಹೊಂದಿರಬೇಕಾಗುತ್ತದೆ. ಹಾಕಿಯ ಬಗ್ಗೆ ಸಂಪೂರ್ಣ ಮಾಹಿತಿ, ತಾಂತ್ರಿಕ ವಿಚಾರಗಳ ಬಗ್ಗೆ ಅರಿವು, ಕ್ರೀಡೆಯಲ್ಲಿ ಬಳಸುವ ತಾಂತ್ರಿಕ ಪದಗಳು, ಆಟಗಾರರು ಮತ್ತು ತಂಡಗಳ ಮಾಹಿತಿ, ದಾಖಲೆಗಳು ಹೀಗೆ ಹಲವು ವಿಚಾರಗಳ ಬಗ್ಗೆ ಅಧ್ಯಯನ ವೀಕ್ಷಕ ವಿವರಣೆಗಾರನಿಗೆ ಅಗತ್ಯ. ಈ ವಿಚಾರದಲ್ಲಿ ಬನೀತ್ ತಾಳ್ಮೆ ಹಾಗೂ ಆಸಕ್ತಿಯಿಂದ ಅಧ್ಯಯನ ಮಾಡಿ ವಿವರಣೆಗಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾನೆ.
ತಾಂತ್ರಿಕ ಜ್ಞಾನವಿದ್ದರಷ್ಟೇ ಸಾಲದು. ಆಕರ್ಷಕ ಧ್ವನಿ, ಸಂದರ್ಭಕ್ಕೆ ತಕ್ಕನಾಗಿ ಏರಿಳಿತ, ಸ್ಪಷ್ಟ ಉಚ್ಛರಣೆಯೂ ಆತನಲ್ಲಿರಬೇಕಾಗುತ್ತದೆ. ಈ ವಿಚಾರದಲ್ಲೂ ಬನೀತ್ ತನ್ನನ್ನು ಕರಗತಗೊಳಿಸಿಕೊಂಡಿರುವುದು ವಿಶೇಷ. ಇಂದಿನ ದಿನದಲ್ಲಿ ಜೋರಾಗಿ ಕಿರುಚುತ್ತಾ ಮೈಕ್ನಲ್ಲಿ ಅಬ್ಬರಿಸುವುದೇ ವೀಕ್ಷಕ ವಿವರಣೆಗಾರನ ಲಕ್ಷಣ ಅಂತ ಯುವ ಪ್ರತಿಭೆಗಳು ಅದನ್ನೇ ಅನುಸರಿಸುವುದನ್ನು ನಾವು ಗಮನಿಸಬಹುದು. ಆದರೆ ಬನೀತ್ ಈ ವಿಚಾರದಲ್ಲಿ ಭಿನ್ನ. ನುರಿತ ವೀಕ್ಷಕ ವಿವರಣೆಗಾರನಾಗಲು ಅಗತ್ಯ ಗುಣಲಕ್ಷಣಗಳೇನೇನು ಇರಬೇಕೋ ಅದನ್ನೆಲ್ಲಾ ಅಧ್ಯಯನ ಮಾಡಿಕೊಂಡು ಮುಂದಡಿಯಿಡುತ್ತಿದ್ದಾನೆ. ಹಿರಿಯರ ಅನುಭವ, ಮಾರ್ದಗರ್ಶನವನ್ನು ಪಡೆಯುತ್ತಾ ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾನೆ. ಆ ಮೂಲಕ ಹಾಕಿ ಕಾಮೆಂಟರಿ ಕ್ಷೇತ್ರಕ್ಕೆ ತಾನೊಬ್ಬ ನುರಿತ ಪ್ರತಿಭೆಯಾಗುವ ಎಲ್ಲಾ ಮುನ್ಸೂಚನೆಯನ್ನು ಎಳೆಯ ವಯಸ್ಸಿನಲ್ಲೇ ನೀಡಿದ್ದಾನೆ.
ಬನೀತ್ ವೀಕ್ಷಕ ವಿವರಣೆ ನೀಡಲು ಆರಂಭಿಸಿದ್ದು ತನ್ನ 16ನೇ ವಯಸ್ಸಿನಿಂದ. ನಾಪೋಕ್ಲುವಿನಲ್ಲಿ ನಡೆದ ಕುಂಡ್ಯೋಳಂಡ ಹಾಕಿ ನಮ್ಮೆಯಲ್ಲಿ ಒಂದು ತಿಂಗಳ ಕಾಲ ನಿರಂತರವಾಗಿ ತೊಡಗಿಸಿಕೊಂಡು ಮೆಚ್ಚುಗೆ ಗಳಿಸಿದ್ದ. ಅತಿ ಹೆಚ್ಚು ತಂಡಗಳು ಪಾಲ್ಗೊಂಡ ಟೂರ್ನಮೆಂಟ್ ಎಂಬ ಗಿನ್ನಿಸ್ ದಾಖಲೆಗೂ ಪಾತ್ರವಾಗಿತ್ತು. ಅಲ್ಲಿ ಸಿಕ್ಕ ಯಶಸ್ಸು ಈ ಬಾರಿ ಮುದ್ದಂಡ ಹಾಕಿ ನಮ್ಮೆಯ ವೀಕ್ಷಕ ವಿವರಣೆಗಾರರ ಬಳಗದಲ್ಲಿಯೂ ಅವಕಾಶ ಮಾಡಿಕೊಟ್ಟಿತ್ತು.
ತ್ರಿಭಾಷೆಯಲ್ಲಿ ಹಿಡಿತ..!
ಈ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವವರಿಗೆ ಬಹುಭಾಷೆಯ ಜ್ಞಾನವಿರಬೇಕಾಗುತ್ತದೆ. ಆ ವಿಚಾರದಲ್ಲೂ ಬನೀತ್ ಮುಂದಿದ್ದಾನೆ. ಕನ್ನಡ, ಕೊಡವ, ಇಂಗ್ಲೀಷ್ ಈ ಮೂರು ಭಾಷೆಯಲ್ಲಿ ಹಿಡಿತ ಹೊಂದಿದ್ದಾನೆ. ಹೀಗಾಗಿ ಕೊಡವ ಕೌಟುಂಬಿಕ ಟೂರ್ನಿ ಮಾತ್ರವಲ್ಲದೆ ಜಿಲ್ಲೆಯ ವಿವಿಧೆಡೆ ಹಾಗೂ ನೆರೆಯ ಜಿಲ್ಲೆಗಳಲ್ಲಿ ನಡೆದ ಪ್ರತಿಷ್ಠಿತ ಟೂರ್ನಿಯಲ್ಲಿಯೂ ಭಾಗವಹಿಸಿ ಸೈ ಎನಿಸಿಕೊಂಡಿದ್ದಾನೆ.
ಈತ ಮಡಿಕೇರಿಯ ಉದ್ಯಮಿ ಚೈಯ್ಯಂಡ ಸತ್ಯ ಗಣಪತಿ ಹಾಗೂ ಪದ್ಮಾ ದಂಪತಿಯ ಕಿರಿಯ ಪುತ್ರ. ಸಂತ ಜೋಸೇಫರ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ವ್ಯಾಸಂಗ ಪೂರೈಸಿದ್ದಾನೆ. ಮುಂದೆ ಇಂಜಿನಿಯರಿಂಗ್ ವ್ಯಾಸಂಗ ಮಾಡಲು ಸಜ್ಜಾಗಿದ್ದು, ಬಳಿಕ ಸೇನೆಗೆ ಸೇರಬೇಕೆಂಬ ಮಹದಾಸೆಯನ್ನು ಹೊಂದಿದ್ದಾರೆ. ಪ್ರೌಢಶಾಲಾ ಅವಧಿಯಲ್ಲಿ ಎನ್ಸಿಸಿಯಲ್ಲಿ ತೊಡಗಿಸಿಕೊಂಡಿದ್ದ. ತಾನು ಸೇನೆಗೆ ಸೇರಲು ಬೇಕಾದ ತಯಾರಿಯನ್ನು ಶಾಲಾ ಜೀವನದಿಂದಲೇ ಮಾಡಿಕೊಂಡು ಬಂದಿರುವ ಬನೀತ್, ಮುಂದೆ ಸೇನೆಗೆ ಸೇರಿ ದೇಶ ಸೇವೆಗೆ ಅವಕಾಶ ಸಿಗುತ್ತದೆ ಎಂಬ ಅಚಲ ವಿಶ್ವಾಸದಲ್ಲಿದ್ದಾನೆ.
ಪೋಷಕರು ಕೂಡಾ ಮಗನ ಆಸೆಗೆ ನೀರೆರೆಯುತ್ತಾ ಬಂದಿದ್ದಾರೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬೇಕೆಂದು ಹಂಬಲಿಸುವ ಪೋಷಕರ ನಡುವೆ ಬನೀತ್ ಪೋಷಕರು ಭಿನ್ನವಾಗಿ ಕಾಣಿಸುತ್ತಾರೆ. ಆತನ ಆಸೆ, ಆಕಾಂಕ್ಷೆಯನ್ನ ಅರಿತು ಅದಕ್ಕೆ ಪ್ರೋತ್ಸಾಹವನ್ನು ಮೊದಲಿನಿಂದಲೂ ನೀಡುತ್ತಿದ್ದಾರೆ. ಶೈಕ್ಷಣಿಕವಾಗಿ ಅಂಕಗಳಿಕೆ ವಿಚಾರದಲ್ಲಿ ಯಾವತ್ತೂ ಒತ್ತಡ ಹೇರಿದವರಲ್ಲ. ಇದರ ಪರಿಣಾಮ ಬನೀತ್ ಕಾಮೆಂಟರಿ ಕ್ಷೇತ್ರದಲ್ಲಿ ಪಕ್ವತೆಯನ್ನು ಬೆಳೆಸಿಕೊಳ್ಳುವುದಕ್ಕೆ ಅನುಕೂಲವಾಗಿದೆ.
ಬನೀತ್ ಹೇಳೋದೇನು…
ಬಾಲ್ಯದಿಂದಲೇ ವೇದಿಕೆ ಕಾರ್ಯಕ್ರಮಗಳ ನಿರೂಪಣೆಯಲ್ಲಿ ಆಸಕ್ತಿ ಇತ್ತು. ಹಾಕಿ ಬಗ್ಗೆಯೂ ಒಲವು ಹೊಂದಿದೆ. ಅಜ್ಜಿ ಮತ್ತು ಅಪ್ಪನೂ ಮಾತುಗಾರಿಕೆಯಲ್ಲಿ ಪರಿಣಿತರಿದ್ದರು. ಹಾಗಾಗಿ ಅವರ ಪ್ರಭಾವವೂ ನನ್ನ ಮೇಲೆ ಇದೆ. ಕುಂಡ್ಯೋಳಂಡ ಹಾಕಿ ನಮ್ಮೆಯಲ್ಲಿ ಅಚಾನಕ್ ಆಗಿ ವೀಕ್ಷಕ ವಿವರಣೆ ನೀಡುವ ಅವಕಾಶ ಸಿಕ್ಕಿತ್ತು. ಪ್ರಮುಖ ಮೈದಾನದಲ್ಲೇ ಕಾಮೆಂಟರಿಗೆ ಅವಕಾಶ ಕೊಟ್ಟಿದ್ದರು. ಅಲ್ಲಿ ಆದ ಅನುಭವ ಮತ್ತು ನನ್ನ ವೀಕ್ಷಕ ವಿವರಣೆಯನ್ನು ಗಮನಿಸಿದ ಹಿರಿಯರು ಮುದ್ದಂಡ ಹಾಕಿ ನಮ್ಮೆಯಲ್ಲಿಯೂ ಅವಕಾಶ ಮಾಡಿಕೊಟ್ಟರು. ಸಾಂಪ್ರದಾಯಿಕ ಶೈಲಿಯಲ್ಲದೆ, ಹೊಸತನವನ್ನು ಬೆರೆಸಿಕೊಂಡು(ಕಾಮೆಂಟರಿಯ ಗೌರವಕ್ಕೆ ಧಕ್ಕೆಯಾಗದ ರೀತಿ) ಯುವ ಸಮೂಹವನ್ನು ಆಕರ್ಷಿಸುವ ರೀತಿಯಲ್ಲಿ ಯಾವ ರೀತಿ ವೀಕ್ಷಕ ವಿವರಣೆ ನೀಡಬಹುದೆಂಬುದನ್ನು ಈ ಬಾರಿಯ ಹಾಕಿ ನಮ್ಮೆಯಲ್ಲಿ ಕಲಿತಿದ್ದೇನೆ. ತಂಡದಲ್ಲಿದ್ದ ಹಿರಿಯ ವೀಕ್ಷಕ ವಿವರಣೆಗಾರರೆಲ್ಲರು ವಿವಿಧ ರೀತಿಯಲ್ಲಿ ಸಲಹೆ, ಸೂಚನೆಗಳನ್ನ ಕೊಟ್ಟರು. ತಪ್ಪುಗಳನ್ನ ತಿದ್ದಿ ಯಾವ ರೀತಿಯಲ್ಲಿ ಮುಂದುವರೆಯಬೇಕೆಂದು ಮಾರ್ಗದರ್ಶನ ಮಾಡಿದರು. ಹಾಕಿಯ ಕುರಿತಾದ ಪುಸ್ತಕಗಳನ್ನು ಓದುತ್ತಾ, ನಿಯಮಗಳ ಬಗ್ಗೆಯೂ ನಿರಂತರವಾಗಿ ತಿಳಿದುಕೊಳ್ಳುತ್ತಿದ್ದೇನೆ. ಆಟಗಾರರ ಬಗ್ಗೆಯೂ ಸಾಕಷ್ಟು ಅಧ್ಯಯನ ಮಾಡಿದ್ದು, ಕುತೂಹಲಕಾರಿ ಅಂಶಗಳನ್ನು ನೋಟ್ ಮಾಡಿಕೊಳ್ಳುತ್ತಿದ್ದೇನೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದಾಗ ಈಗ ಸಾಕಷ್ಟು ಬದಲಾವಣೆ ನನ್ನಲ್ಲಿ ಆಗಿದೆ. ಮುಂದೆ ಸಿಗುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಕೊಡಗಿನ ಹೆಮ್ಮೆ ಆಗಿರುವ ಹಾಕಿ ಕ್ರೀಡೆಗೆ ನನ್ನಿಂದಾಗುವ ಸೇವೆಯನ್ನು ನೀಡಬೇಕೆಂದಿದ್ದೇನೆ. ಯಾವ ಟೂರ್ನಮೆಂಟ್ ಅದರೂ ಅವಕಾಶ ಸಿಕ್ಕಿದರೆ ಖಂಡಿತವಾಗಿಯೂ ಬಳಸಿಕೊಳ್ಳುತ್ತೇನೆ.
✍️ ಬರಹ – ಕಿಶೋರ್ ರೈ ಕತ್ತಲೆಕಾಡು
CSIR-NIIST ಮತ್ತು ಕೊಡಗು ವಿಶ್ವವಿದ್ಯಾಲಯದ ನಡುವೆ ಒಪ್ಪಂದಕ್ಕೆ ಸಹಿ – ಏನಿದರ ವಿಶೇಷತೆ..?
ʼಕೊಡವ ಮುಸ್ಲಿಂ ಅಸೋಸಿಯೇಷನ್ ದಫ್ ಮುಟ್ಟ್’ ತಂಡ ಅಸ್ತಿತ್ವಕ್ಕೆ – ದೂರದರ್ಶನ ಕೇಂದ್ರದಲ್ಲಿ ಪ್ರದರ್ಶನ ಮತ್ತು ದಾಖಲೀಕರಣ…
ಕೃತಕ ಕಾಲು ಜೋಡಣೆ ಯಶಸ್ವಿ – ಅಸಹಾಯಕನಿಗೆ ನೆರವಾದ ಮಾಧ್ಯಮ ಸ್ಪಂದನ ಟೀಂ..!
ಕ್ಲೋಸ್ಬರ್ನ್ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಕೊಡುಗೆಯಾಗಿ ನೀಡಿದ ಬೆಳೆಗಾರ…
Subscribe our newsletter