ವಿರಾಜಪೇಟೆ ಕಾವೇರಿ ಕಾಲೇಜು (Cauvery College) ಹಾಗೂ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಒಂದು ದಿನದ ಅಣಬೆ (Mushroom) ಬೇಸಾಯದ ಕುರಿತ ಪ್ರಯೋಗಾತ್ಮಕವಾದ ಕಾರ್ಯಗಾರವು (Workshop) ಕಾಲೇಜಿನ ಕೌಸ್ತುಭ ಸಭಾಭವನದಲ್ಲಿ ಮಂಗಳವಾರ ನಡೆಯಿತು .
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ದಾನ ಬಡತನದಲ್ಲಿ ಹುಟ್ಟೋದು ನಮ್ಮ ತಪ್ಪಲ್ಲ ಆದರೆ ಬಡವರಾಗಿ ಸಾಯುವುದು ನಮ್ಮ ತಪ್ಪು. ಪ್ರತಿಯೊಬ್ಬ ಮನುಷ್ಯ ಸಾಧಿಸುವ ಚಲವಿದ್ದರೆ ಹಲವಾರು ಅವಕಾಶಗಳಿವೆ . ಆರ್ಥಿಕ ಸಭಲರಾಗಲು ವಿವಿಧ ಮಾರ್ಗಗಳಿದ್ದು ಅದರಲ್ಲಿ ಅಣಬೆ ಬೇಸಾಯವು ಒಂದು. ಇದನ್ನು ಅರೆಕಾಲೀಕ ವೃತ್ತಿಯಾಗಿ ತೆಗೆದುಕೊಂಡು ಸ್ವಉದ್ಯೋಗ ಪರಿಕಲ್ಪನೆಯಲ್ಲಿ ತಮ್ಮ ವಿದ್ಯಾಭ್ಯಾಸದೊಂದಿಗೆ ವಿದ್ಯಾರ್ಥಿಗಳು ರೂಡಿಸಿಕೊಂಡು ಅಣಬೆ ಬೇಸಾಯವನ್ನು ಆರಂಭಿಸಿದರೆ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದರೊಂದಿಗೆ ಸ್ವ ಉದ್ಯೋಗ ಮಾಡಬಹುದೆಂದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಲಕ್ಷ್ಮಿ ಸಾಗರ್ ಅವರು ಮಾತನಾಡಿ ಅಣಬೆ ಬೇಸಾಯವನ್ನು ಪೂರ್ಣಕಾಲಿಕ ಹಾಗೂ ಅರೆಕಾಲಿಕ ವೃತ್ತಿಯಾಗಿ ತೆಗೆದುಕೊಳ್ಳ ಬಹುದು. ಇದರಲ್ಲಿ ನಾವು ನೂರು ರೂಪಾಯಿಯನ್ನು ಹೂಡಿಕೆ ಮಾಡಿದರೆ 500 ರೂಪಾಯಿ ಲಾಭವನ್ನು ಗಳಿಸಬಹುದು. ಅತಿ ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭವನ್ನು ಗಳಿಸುವುದರೊಂದಿಗೆ ಹೆಚ್ಚಿನ ಆರ್ಥಿಕ ಸಬಲರಾಗಲು ಇದೊಂದು ಉತ್ತಮ ವೃತ್ತಿಯೆಂದರು. .
ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಅಣಬೆ ಬೇಸಾಯ ವಿಭಾಗದ ಪ್ರಯೋಗಾಲಯ ಸಹಾಯಕರಾದ ವೀಣಾ ಅಶೋಕ್ ರವರು ಮಾತನಾಡಿ ಕ್ ಅಣಬೆ ಬೇಸಾಯದಲ್ಲಿ ಅನುಸರಿಸಬೇಕಾದ ಕ್ರಮಗಳು ಹಾಗೂ ಅಣಬೆಯನ್ನು ಸೇವಿಸುವುದರಿಂದ ಆಗುವಂತಹ ಆರೋಗ್ಯಕರ ಉಪಯೋಗಗಳೊಂದಿಗೆ ಬೆಳೆದಂತಹ ಅಣಬೆಗಳನ್ನು ಹೇಗೆ ಮೌಲ್ಯಯುತ ವಸ್ತುಗಳಾಗಿ ಬದಲಾವಣೆ ಮಾಡಬೇಕೆಂಬುದರ ಕುರಿತು ತಿಳಿಸಿದರು .
ವೇದಿಕೆಯ ಕಾರ್ಯಕ್ರಮದ ನಂತರ ಅಣಬೆ ಬೆಳೆಗಾರರಾದಂತಹ ಸಿ.ಎ .ಮಾದಪ್ಪ ಹಾಗೂ ಆಶಾ ಮಾದಯ್ಯನವರು ವಿದ್ಯಾರ್ಥಿಗಳಿಗೆ ಅಣಬೆ ಬೇಸಾಯವನ್ನು ವಿಧಾನವನ್ನು ವಿವರಣಾತ್ಮಕವಾಗಿ ಪ್ರಾತ್ಯಕ್ಷಿ ತೆಯೊಂದಿಗೆ ತಿಳಿಸಿಕೊಟ್ಟು ನಂತರ ವಿದ್ಯಾರ್ಥಿಗಳಿಂದ ಪ್ರಯೋಗಾತ್ಮಕವಾಗಿ ಅಣಬೆ ಬೇಸಾಯವನ್ನು ಮಾಡಿಸಲಾಯಿತು. ವೇದಿಕೆಯ ಮೇಲೆ ಐಕ್ಯೂಎಸಿ ಸಂಚಾಲಕಿ ಪ್ರಿಯ ವಿದ್ಯಾರ್ಥಿ ಕ್ಷೇಮ ಪಾಲನ್ನು ಸಮಿತಿ ಸಂಚಾಲಕ ನಾಗರಾಜು ಇದ್ದರು .ಈ ಕಾರ್ಯಗಾರದಲ್ಲಿ ಕಾಲೇಜಿನ ಉಪನ್ಯಾಸಕರಾದ ನಿರ್ಮಿತ , ಬೊಜಮ್ಮ , ಸುನಿಲ್ ಕುಮಾರ್.ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.