ಮಡಿಕೇರಿಯಲ್ಲಿ ಹೊಸ ಪ್ರಯೋಗ : ಮಕ್ಕಳ ತಂಡದಿಂದ ಯಕ್ಷಗಾನ ಪ್ರದರ್ಶನ

ಮಡಿಕೇರಿ : ಸ್ಥಳೀಯ ಮಕ್ಕಳಿಂದಲೇ ರೂಪುಗೊಂಡ ಕೊಡಗಿನ ಪ್ರಪ್ರಥಮ ಮಕ್ಕಳ ಯಕ್ಷಗಾನ ತಂಡ ನಡೆಸಿಕೊಟ್ಟ ಎರಡು ಪ್ರಸಂಗಗಳು ಮಡಿಕೇರಿಯ ಮೈತ್ರಿ ಸಮುದಾಯ ಭವನದಲ್ಲಿ ಇತ್ತೀಚೆಗೆ ಯಶಸ್ವಿ ಪ್ರದರ್ಶನ ಕಂಡವು. ಕಲಾಕಾವ್ಯ ನಾಟ್ಯಶಾಲೆ ಪ್ರಸ್ತುತ ಪಡಿಸಿದ ವೀರ ಅಭಿಮನ್ಯು ಮತ್ತು ಶ್ರೀದೇವಿ ಮಹಾತ್ಮೆ ಎಂಬ ಪ್ರಸಂಗವನ್ನು ಪುಟಾಣಿ ಮಕ್ಕಳು ಅಮೋಘವಾಗಿ ಪ್ರದರ್ಶಿಸುವ ಮೂಲಕ ಪ್ರೇಕ್ಷಕರ ಹೃದಯ ಗೆದ್ದರು. ಲೋಕಕಂಟಕನಾದ ಮಹಿಷಾಸುರನನ್ನು ಜಗನ್ಮಾತೆ ಸಂಹರಿಸುವ `ಶ್ರೀದೇವಿ ಮಹಾತ್ಮೆ’ ಪ್ರಸಂಗದಲ್ಲಿ ಮಹಿಷ, ದೇವಿ ಮತ್ತು ಸಿಂಹದ ಪಾತ್ರ ಮನೋಜ್ಞವಾಗಿತ್ತು. ಮಹಿಷಾಸುರ ಮತ್ತು […]