ಮುದ್ದಂಡ ಕಪ್ ಹಾಕಿ ಉತ್ಸವ: ಏ.3ರ ಹಾಕಿ ಪಂದ್ಯಾವಳಿಯ ವಿಜೇತ ತಂಡಗಳ ಮಾಹಿತಿ

ಮೈದಾನ 1: ಕುಂದಿರ ಮತ್ತು ಪೊನ್ನಿಮಾಡ ತಂಡಗಳ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಪೊನ್ನಿಮಾಡ ತಂಡ ಗೆಲುವು ದಾಖಲಿಸಿತು. ಪೊನ್ನಿಮಾಡ ಪರ ಸಂತೋಷ್ ಪೂವಯ್ಯ ಹಾಗೂ ನಾಚಪ್ಪ ತಲಾ 1 ಗೋಲು ದಾಖಲಿಸಿದರು. ಕಾವೇರಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಚಟ್ಟಂಗಡ ಮತ್ತು ಕುಟ್ಟಂಡ (ಅಮ್ಮತ್ತಿ) ನಡುವಿನ ಪಂದ್ಯದಲ್ಲಿ ಕುಟ್ಟಂಡ ತಂಡ 3-0 ಗೋಲುಗಳ ಅಂತರದಲ್ಲಿ ಜಯಸಾಧಿಸಿತು. ಕುಟ್ಟಂಡ ತಂಡದ ರಜೀನ ಬಿದ್ದಪ್ಪ 2 ಹಾಗೂ ಸಂದೀಪ್ ಬಿದ್ದಪ್ಪ 1 ಗೋಲು ದಾಖಲಿಸಿದರು. […]
ಕೊಡಗಿನಲ್ಲಿ ಅಡ್ಡಾದಿಡ್ಡಿ ಬೈಕ್ ಓಡಿಸ್ತೀರಾ ಹುಷಾರು: ಸವಾರನಿಗೆ ಹಾಕಿರುವ ದಂಡವೆಷ್ಟು ಗೊತ್ತಾ?

ವಾಹನ ಸವಾರರು ಎಚ್ಚಕೆಯಿಂದ ವಾಹನ ಓಡಿಸಬೇಕು. ಏಕೆಂದರೆ ಈಗ ಪೊಲೀಸ್ ತಪಾಸಣೆ ಚುರುಕುಗೊಂಡಿದೆ. ಪೊಲೀಸರ ಜೊತೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ವಾಹನಗಳ ನಿಗಾ ಇಡುವ ಸಿಸ್ಟಂ ಬಂದಿದೆ. ಇದಲ್ಲದೇ ಬೇಕಾಬಿಟ್ಟಿ ವಾಹನ ಓಡಿಸುವವರಿಗೆ ಈಗ ದಂಡ ಪ್ರಮಾಣವೂ ಮೂರ್ನಾಲ್ಕು ಪಟ್ಟು ಹೆಚ್ಚಿದೆ. ಒಮ್ಮೆ ಹೀಗೆ ಏನಾದರೂ ಸಿಲುಕಿಕೊಂಡರೆ ಭಾರೀ ಪ್ರಮಾಣದಲ್ಲಿಯೇ ದಂಡ ತೆರಬೇಕಾಗುತ್ತದೆ. ಇಂತಹದ್ದೇ ಘಟನೆಯೊಂದು ಕೊಡಗಿನ ಸೋಮವಾರಪೇಟೆಯಲ್ಲಿ ವರದಿಯಾಗಿದೆ. ಹೆಲ್ಮೆಟ್ ಧರಿಸಿಲ್ಲ, ಅತಿವೇಗವಾಗಿ, ಜೋರಾಗಿ ಶಬ್ದ ಮಾಡುತ್ತಾ, ಅಜಾಗೃತೆಯಿಂದ ಬೈಕ್ ಓಡಿಸುತ್ತಿದ್ದ ಸವಾರನೊಬ್ಬನ ಪ್ರಕರಣ ಗಂಭೀರವಾಗಿ […]
Power Cut: ಕೊಡಗಿನ ಈ ಪ್ರದೇಶಗಳಲ್ಲಿ ಏ.05 ರಂದು ಕರೆಂಟ್ ಇರಲ್ಲ

ಏಪ್ರಿಲ್, 05 ರಂದು ಬೆಳಗ್ಗೆ 09 ರಿಂದ ಸಂಜೆ 5 ಗಂಟೆಯವರೆಗೆ, ವಿರಾಜಪೇಟೆ ಪಟ್ಟಣ ಸೇರಿದಂತೆ ಕಾಕೋಟುಪರಂಬು, ಕದನೂರು, ಕೆದಮುಳ್ಳೂರು, ಬೇಟೋಳಿ, ಆರ್ಜಿ, ಬಿ.ಶೆಟ್ಟಗೇರಿ, ಬಿಟ್ಟಂಗಾಲ, ಸಿದ್ದಾಪುರ, ಮಾಲ್ದಾರೆ, ಕರಡಿಗೋಡು, ಗುಹ್ಯ, ಅಮ್ಮತ್ತಿ, ಚೆಂಬೆಬೆಳ್ಳೂರು, ಮೂರ್ನಾಡು, ಮರಗೋಡು, ಹೊದ್ದೂರು, ಹಾಕತ್ತೂರು, ಹೊಸ್ಕೇರಿ, ನಾಪೋಕ್ಲು, ಕುಂಜಿಲ, ಎಮ್ಮೆಮಾಡು, ಬಲ್ಲಮಾವಟಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ (Power Cut) ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ತಿಳಿಸಿದ್ದಾರೆ.
ಭಾರತದ ಅತೀ ವೇಗದ ಇಂಟರ್ನೆಟ್ ಪೂರೈಕೆಯಲ್ಲಿ ನಂ.1 ಕಂಪನಿ ಯಾವುದು ಗೊತ್ತೇ?

2024ರ ದ್ವಿತೀಯಾರ್ಧದಲ್ಲಿ ಜಿಯೋ (Jio) ಎಲ್ಲಾ ತಂತ್ರಜ್ಞಾನಗಳಲ್ಲಿ ಮತ್ತು ನಿರ್ದಿಷ್ಟವಾಗಿ 5 ಜಿಗಾಗಿ ಭಾರತದಲ್ಲಿ ಅತ್ಯಂತ ವೇಗದ ಮೊಬೈಲ್ ಇಂಟರ್ನೆಟ್ (Internet) ಪೂರೈಕೆದಾರನಾಗಿದೆ ಎಂದು ನೆಟ್ವರ್ಕ್ ಗುಪ್ತಚರ ಮತ್ತು ಸಂಪರ್ಕ ಒಳನೋಟಗಳ ವೇದಿಕೆಯಾದ ಓಕ್ಲಾ ವರದಿಯಲ್ಲಿ ಪ್ರಕಟಿಸಿದೆ. ಓಕ್ಲಾ ಪ್ರಕಾರ, ಜಿಯೋ ಸರಾಸರಿ 5 ಜಿ ಡೌನ್ಲೋಡ್ ವೇಗವನ್ನು 258.54 ಎಂಬಿಪಿಎಸ್ ಮತ್ತು ಅಪ್ಲೋಡ್ ವೇಗವನ್ನು 14.54 ಎಂಬಿಪಿಎಸ್ ದಾಖಲಿಸಿದೆ. ಅಂತೆಯೇ, ವೇಗದ ಮೊಬೈಲ್ ನೆಟ್ವರ್ಕ್ ಮತ್ತು ಅತ್ಯುತ್ತಮ ಮೊಬೈಲ್ ವ್ಯಾಪ್ತಿ ಎರಡರಲ್ಲೂ ಮುಂಚೂಣಿಯಲ್ಲಿದ್ದ ಜಿಯೋ ಈ […]
ಪೊಲೀಸ್ ಧ್ವಜ ದಿನಾಚರಣೆ: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಟ್ರೋಫಿ ವಿತರಣೆ

ಕೊಡಗು ಜಿಲ್ಲಾ ಪೊಲೀಸ್ ಘಟಕ ವತಿಯಿಂದ ಪೊಲೀಸ್ ಧ್ವಜ ದಿನಾಚರಣೆ (Police Flag Day Celebration) ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಟ್ರೋಫಿ ವಿತರಣಾ ಕಾರ್ಯಕ್ರಮವು ನಗರದ ಪೊಲೀಸ್ (Police) ಕವಾಯತು ಮೈದಾನದಲ್ಲಿ ಬುಧವಾರ ನಡೆಯಿತು. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಹೆಡ್ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಎಸ್.ಸುಧೀಶ್ ಕುಮಾರ್ ಅವರಿಗೆ ಏರ್ ಮಾರ್ಷಲ್(ನಿವೃತ್ತ) ಕೆ.ಸಿ.ಕಾರ್ಯಪ್ಪ ಅವರು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ (Field Marshal K M Cariappa) ಟ್ರೋಫಿಯನ್ನು ವಿತರಿಸಿದರು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಶ್ವಾನದಳ ವಿಭಾಗದಲ್ಲಿ […]
ಹುಲಿತಾಳ ಕ್ರಿಕೆಟ್ ಪ್ರೀಮಿಯರ್ ಲೀಗ್: ಟೀಮ್ ವಿರಾಟ್ಸ್ ಚಾಂಪಿಯನ್

ಮಡಿಕೇರಿ: ಮಡಿಕೇರಿಯಲ್ಲಿ ಫ್ರೆಂಡ್ಸ್ ಹುಲಿತಾಳ (Hulitala) ಇವರ ವತಿಯಿಂದ ಪ್ರಥಮ ವರ್ಷದ ಕ್ರಿಕೆಟ್ ಲೀಗ್ (Cricket League) ಪಂದ್ಯದಲ್ಲಿ ಟೀಮ್ ವಿರಾಟ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದರೆ ಟ್ಯಾಂಗೋ ಬಾಯ್ಸ್ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು, ಹಾಗೆಯೆ 3 ಹಾಗೂ 4 ಸ್ಥಾನವನ್ನು ಟೀಮ್ ಶೀಲ್ಡ್ ಮೇಕೇರಿ ಹಾಗೂ ಪ್ರವೀತ್ ಕ್ರಿಕೆಟರ್ಸ್ ಮರಗೋಡು ಪಡೆದುಕೊಂಡಿತು, ನಗರದ ಮ್ಯಾನ್ಸ್ ಕಾಂಪೌಂಡ್ ಮೈದಾನದಲ್ಲಿ ನಡೆದ ಹುಲಿತಾಳ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಒಟ್ಟು ಹತ್ತು ತಂಡಗಳು ಚಾಂಪಿಯನ್ ಟ್ರೋಫಿಗಾಗಿ ಸೆಣಸಾಡಿದವು. ಮೊದಲು […]
ಅರೆಭಾಷಿಕರ ಐನ್ಮನೆ ಐಸಿರಿ ಕಾರ್ಯಕ್ರಮ

ಅರೆಭಾಷೆಯು ಜಾತಿ, ಸಮುದಾಯ, ಗಡಿಯನ್ನು ಮೀರಿ ಬೆಳೆಯುತ್ತಿದ್ದು, ಇದನ್ನು ಇನ್ನಷ್ಟು ವಿಸ್ತರಿಸಲು ಗಡಿನಾಡು ಉತ್ಸವ ಸೇರಿದಂತೆ ವಿನೂತನ ಕಾರ್ಯಕ್ರಮಗಳನ್ನು ಕರ್ನಾಟಕ ಅರೆಭಾಷೆ (Arebhashe) ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ನುಡಿದರು. ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದಲ್ಲಿರುವ ಕುಡೆಕಲ್ಲು ಐನ್ಮನೆಯಲ್ಲಿ ನಡೆದ ಅರೆಭಾಷಿಕರ ಐನ್ಮನೆ ಐಸಿರಿ (Ainmane Aisiri) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.` ಮುಂದುವರಿದು ಮಾತನಾಡಿದ ಅವರು ಐನ್ಮನೆ ಎನ್ನುವುದು ಎಲ್ಲರನ್ನು ಒಗ್ಗೂಡಿಸುವ ಜಾಗ. ಇಲ್ಲಿ ನಮ್ಮ […]
ವಿರಾಜಪೇಟೆಯಲ್ಲಿ NSS ವಿದ್ಯಾರ್ಥಿಗಳಿಂದ ಪರಿಸರ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

ವಿರಾಜಪೇಟೆ: ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿ (ರಿ ), ಆರ್ಜಿ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಆರ್ಜಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಜಾಥಾ ಅಭಿಯಾನ ಕಾರ್ಯಕ್ರಮ ನಡೆಯಿತು. ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜು ಹಾಗೂ ಕಾವೇರಿ ಪದವಿ ಕಾಲೇಜಿನ ಎನ್. ಎಸ್. ಎಸ್ (NSS) ಘಟಕದ ವಿದ್ಯಾರ್ಥಿಗಳು ಸ್ವಚ್ಛತಾ ಜಾಥಾದಲ್ಲಿ ಭಾಗವಹಿಸಿದ್ದರು. ಈ ಅಭಿಯಾನವನ್ನು ಆರ್ಜಿ ಗ್ರಾಮ ಪಂಚಾಯತ್ ನಲ್ಲಿ ಉದ್ಘಾಟಿಸಿ ಮಾತನಾಡಿದ ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ಮಾಚಯ್ಯ ರವರು […]
ತೆನ್ನಿರ ಮೈನಾ ರಾಜ್ಯ ಕೋರ್ ಕಮಿಟಿ ಸದಸ್ಯರಾಗಿ ನೇಮಕ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಂಚೂಣಿ ಘಟಕವಾದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಜ್ಯ ಕೋರ್ ಕಮಿಟಿಯಲ್ಲಿ ಕೊಡಗು ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ತೆನ್ನಿರ ಮೈನಾ (Thennira Maheena) ಸದಸ್ಯರಾಗಿ ನೇಮಕವಾಗಿದ್ದಾರೆ. ಕಳೆದ ಎರಡು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಜವಾಬ್ದಾರಿ ಮತ್ತು ಹೊಣೆಗಾರಿಕೆ ಹೊತ್ತಿದ್ದ ತೆನ್ನಿರ ಮೈನಾ ರವರನ್ನು ಕೋರ್ ಕಮಿಟಿಗೆ ನೇಮಕ ಮಾಡುವಂತೆ ಸಂಘಟನೆಯ ರಾಜ್ಯಾಧ್ಯಕ್ಷರಾದ ವಿಜಯ್ ಸಿಂಗ್ ರವರು ಎ.ಐ.ಸಿ.ಸಿ […]
ಕೊಡಗಿನ ಗೀತಾ ನಾಯ್ಡುಗೆ ಕರ್ನಾಟಕ ಇನ್ ಸ್ಪೈರಿಂಗ್ ವುಮೆನ್ ಪ್ರಶಸ್ತಿ

ಬಹುಮುಖ ಪ್ರತಿಭೆ ಪಾಲಿಬೆಟ್ಟದ ಟಿ.ಸಿ ಗೀತಾ ನಾಯ್ಡು (Geetha Naidu) ಅವರಿಗೆ ಬೆಂಗಳೂರು ಪ್ರೆಸ್ ಕ್ಲಬ್ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ‘ಕರ್ನಾಟಕ ಇನಸ್ಪೈರ್ರಿಂಗ್ ವುಮೆನ್ – 2025’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಗೀತಾ ನಾಯ್ಡು ಅವರದು ಆರಂಭದಿಂದಲೂ ಬಹುಮುಖ ಪ್ರತಿಭೆಯುಳ್ಳ ವಕ್ತಿತ್ವ. 2023ರಿಂದ ದಕ್ಷಿಣ ಕೊಡಗಿನ ಬಾಳೆಲೆಯ ಪ್ರತಿಭಾ ಎಜುಕೇಷನಲ್ ಇನ್ಸ್ಟಿಟ್ಯೂಟಿನ ಪ್ರಿನ್ಸಿಪಾಲ್ ಆಗಿ ಕೆಲಸ ಮಾಡುತ್ತಿರುವ ಗೀತಾ ನಾಯ್ಡು ಅವರು ಪೊನ್ನಂಪೇಟೆ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿಯಾಗಿ, ಕೊಡಗು ಬಲಿಜ ಸಮಾಜದ ಪ್ರಧಾನ ಕಾರ್ಯದರ್ಶಿಯಾಗಿ, […]