ವಿರಾಜಪೇಟೆಯಲ್ಲಿ ನೂತನ ಬಸ್ ತಂಗುದಾಣ ಲೋಕಾರ್ಪಣೆ

ವಿರಾಜಪೇಟೆಯಲ್ಲಿ ನೂತನ ಬಸ್ ತಂಗುದಾಣ ಲೋಕಾರ್ಪಣೆ

Share this post :

ಪಟ್ಟಣದ ಪರಂಜರುಪೇಟೆಯ ನಿಸರ್ಗ ಬಡಾವಣೆಯ ((Nisarga Layout) ಬಳಿ ನೂತನವಾಗಿ ನಿರ್ಮಿಸಿದ ಬಸ್‌ ತಂಗುದಾಣವನ್ನು (new bus stand)
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್‌ ಪೊನ್ನಣ್ಣ ಲೋಕಾರ್ಪಣೆಗೊಳಿಸಿದರು.
ಈ ವೇಳೆ ಮಾತನಾಡಿದ ಇವರು ಬಸ್‌ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಈ ತಂಗುದಾಣದ (bus stand)  ನಿರ್ಮಾಣ ಮಾಡಲಾಗಿದ್ದು ಇದರ ಸದುಪಯೋಗವನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು ಅದೇ ರೀತಿ ಸುಚಿತ್ವವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಇದಕ್ಕೆ ಸಂಭಂದ ಪಟ್ಟವರು ಇಲ್ಲಿ ಇರಲು ಪೂರಕವಾದ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಹೇಳಿದರು.
ಈ ಸಭೆಯಲ್ಲಿ ನಿಸರ್ಗ ಬಡಾವಣೆಯ ನಿವಾಸಿಗಳು ಎ.ಎಸ್‌ ಪೊನ್ನಣ್ಣರನ್ನು ಸನ್ಮಾನಿಸಿದರು. ಮುಖ್ಯಾಧಿಕಾರಿ ಪಿ.ಕೆ. ನಾಚಪ್ಪ , ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ನಿಸರ್ಗ ನಿವಾಸಿಗಳಾದ ಕಾಣತಂಡ ಜಗದೀಶ್‌, ವಕೀಲ ಡಿ.ಸಿ ಧ್ರುವಕುಮಾರ್‌, ಉದ್ಯೋಗಿ ಮನೋಜ್‌, ಕಾಳಮಂಡ ಜಗತ್‌, ಜಿಲ್ಲಾ ಕಾಂಗ್ರೇಸ್‌ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಜಾನ್ಸನ್‌ , ನಗರ ಸಮಿತಿ ಕಾರ್ಯದರ್ಶಿ ಎಂ.ಎಂ. ಶಶಿಧರನ್‌ , ಪುರಸಭೆ ಸದಸ್ಯರು ಹಾಗೂ ಸ್ಥಳಿಯ ನಿವಾಸಿಗಳು ಭಾಗವಹಿಸಿದರು.