ವಿರಾಜಪೇಟೆ (virajpet) ನಗರದ ನಿವಾಸಿಗಳಾದ ಮೊಹಮ್ಮದ್ ಶಾಫಿ ಮತ್ತು ಮುಕ್ರಂ ಅವರು ಮಾನವೀಯತೆಯ ಸ್ಫೂರ್ತಿದಾಯಕ ಉದಾಹರಣೆಯಾಗಿ, ವಿರಾಜಪೇಟೆ ನಗರದಲ್ಲಿ ಬಿದ್ದು ಸಿಕ್ಕಿದ್ದ ಪರ್ಸ್ನ್ನು ಅದರೊಳಗಿನ ನಗದು ಹಣ, ಮೊಬೈಲ್ ಫೋನ್ ಹಾಗೂ ಮಹತ್ವದ ಬ್ಯಾಂಕ್ ದಾಖಲೆಗಳೊಂದಿಗೆ ಕೂಡಲೇ ಪೊಲೀಸ್ ಠಾಣೆಗೆ ಹಾಜರುಪಡಿಸಿ, ತಕ್ಷಣವೇ ಪರ್ಸ್ (purse) ಅನ್ನು ಮಾಲಿಕರಾದ ಬಾಳುಗೋಡು ಗ್ರಾಮದ ಲೀಲಾವತಿ ಅವರಿಗೆ ಹಿಂತಿರುಗಿಸುವ ಮೂಲಕ ತಮ್ಮ ಪ್ರಾಮಾಣಿಕತೆ, ನಿಷ್ಠೆ ಮತ್ತು ಸಮಾಜದ ಪರವಾದ ಮಾನವೀಯ ಮೌಲ್ಯಗಳನ್ನು ಮೆರೆದಿದ್ದಾರೆ.
