ಮಡಿಕೇರಿ : ಸ್ವಸ್ತಿಕ್ ಯುವ ವೇದಿಕೆಯ 24ನೇ ವರ್ಷದ ಗಣೇಶೋತ್ಸವ ಸಮಿತಿಯ ಜಂಟಿ ಅಧ್ಯಕ್ಷರಾಗಿ ಜಗದೀಶ್ (ಜಗ್ಗಿ) ಹಾಗೂ ಮಿಲನ್ ಆಚಾರ್ಯ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ನಂದ, ಪ್ರಧಾನ ಕಾರ್ಯದರ್ಶಿಯಾಗಿ ಕೀರ್ತಿ, ಸಹ ಕಾರ್ಯದರ್ಶಿಯಾಗಿ ಪುನೀತ್ ಭೀಮಯ್ಯ, ಖಜಾಂಜಿಯಾಗಿ ಅಂಚೆಮನೆ ಸತೀಶ್ ಕುಟ್ಟಪ್ಪ, ಸಹ ಖಜಾಂಜಿಯಾಗಿ ಮನೋಹರ್, ಗೌರವರಾಧ್ಯಕ್ಷರಾಗಿ ಸವಿತಾ ರಾಕೇಶ್, ಪ್ರೇಮ ರಾಮಯ್ಯ, ರಶ್ಮಿ ಪ್ರವೀಣ್, ನಿರ್ದೇಶಕರಾಗಿ ಜಯನ್ ಡಿ, ಶಿವರಾಜ್, ಸೋನಲ್ ಎಂ.ಎಸ್, ಮಂಜುನಾಥ್, ಹೇಮಂತ್ ಕುಮಾರ್, ಸಮಿತಿ ಮುಖ್ಯಸ್ಥರಾಗಿ ಎಂ.ಎಸ್. ಪ್ರಸಾದ್ ಆಯ್ಕೆಯಾಗಿದ್ದಾರೆಂದು ಸಮಿತಿಯ ಸ್ಥಾಪಕಾಧ್ಯಕ್ಷ ಕುಲದೀಪ್ ಪೂಣಚ್ಚ ತಿಳಿಸಿದ್ದಾರೆ.
