ವಿರಾಜಪೇಟೆ ಕಾವೇರಿ ಕಾಲೇಜು, ಕೊಡವ ಹಾಕಿ ಅಕಾಡೆಮಿ ಹಾಗೂ ಹಾಕಿ ಕರ್ನಾಟಕದ ಸಂಯುಕ್ತ ಆಶ್ರಯದಲ್ಲಿ ಕಾವೇರಿ ಕಾಲೇಜಿನ ಕೌಸ್ತುಭ ಸಭಾಭವನದಲ್ಲಿ ಗುರುವಿರ ನಡೆದ ಹಾಕಿ ತೀರ್ಪುಗಾರರ ಕಾರ್ಯಗಾರದ (Hockey Referee Workshop) ಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸೋಮವಾರಪೇಟೆ ತಾಲೂಕು ಕೊಡವ ಹಾಕಿ ((Hockey) ಮಿಯ ಕಾರ್ಯನಿರತ ಉಪಾಧ್ಯಕ್ಷರಾದ ಕುಕ್ಕೆರ ಜಯ ಚಿನ್ನಪ್ಪ ಮಾತನಾಡಿ, ನಮ್ಮ ಕಾಲದ ಹಾಕಿ ಆಟಕ್ಕೂ ,ಈ ಕಾಲದ ಹಾಕಿಯ ಆಟಕ್ಕೂ ಬಹಳ ಬದಲಾವಣೆಯಾಗಿದೆ. ಈ ರೀತಿಯ ಕಾರ್ಯಗಾರಗಳು ನಡೆದಂತಹ ಸಂದರ್ಭದಲ್ಲಿ ನೂತನವಾಗಿ ಅಳವಡಿಸಲಾಗಿರುವಂತಹ ನಿಯಮಗಳು ಎಲ್ಲಾ ಕ್ರೀಡಾಪಟುಗಳಿಗೂ ಇತರರಿಗೂ ತಿಳಿಯಲು ಸಾಧ್ಯ ಎಂದರು.
ಈ ಕಾರ್ಯಗಾರದಲ್ಲಿದ್ದ ಸಂಪನ್ಮೂಲ ವ್ಯಕ್ತಿಗಳು ಹೆಚ್ಚಿನ ವಿಚಾರಗಳನ್ನು ತಮಗೆ ಎರಡು ದಿನಗಳ ಕಾಲ ತಿಳಿಸಿಕೊಟ್ಟಿದ್ದಾರೆ. ತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅತಿ ಮುಖ್ಯವಾಗಿ ಯಾವುದೇ ಕೆಲಸವಾಗಲಿ , ಕ್ರೀಡೆಯಾಗಲಿ, ಬಿಟ್ಟುಕೊಡಬಾರದು ಹಾಗೂ ಜೀವನದಲ್ಲಿ ಸದಾ ಸಕಾರಾತ್ಮಕ ಚಿಂತನೆಗಳಿಂದ ಕೂಡಿರಬೇಕು .ಡೆಡಿಕೇಶನ್, ಡಿಟರ್ಮಿನೇಷನ್, ಡಿಸಿಪ್ಲೈನ್, ಡಿವೋಶನ್ ಈ ನಾಲ್ಕು ಡಿ ಗಳು ಅತಿ ಮುಖ್ಯ ಎಂದರು. ನಂತರ ಕೊಡುವ ಕೌಟುಂಬಿಕ ಹಾಕಿ ಕ್ರೀಡಾಕೂಟ ಬೆಳೆದು ಬಂದ ವಿವಿಧ ಹಂತವನ್ನು ವಿವರಿಸಿ ಈ ವರ್ಷ ಕೌಟುಂಬಿಕ ಹಾಕಿ ಕ್ರೀಡಾಕೂಟ ಬೆಳ್ಳಿ ಹಬ್ಬವನ್ನು ಆಚರಿಸಲಿದೆ ಎಂದರು .
ಎರಡು ದಿನಗಳ ಕಾಲ ನಡೆದ ಕಾರ್ಯಗಾರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಬೆನಡಿಕ್ಟ್ ಆರ್ ಸಲ್ದಾನ ನಮಗೆ ತಪ್ಪನ್ನು ಮಾಡಲು ಯಾವುದೇ ರೀತಿಯಾದಂತಹ ಮಾರ್ಗದರ್ಶನ ಪ್ರೇರಣೆಯ ಅಗತ್ಯವಿರುವುದಿಲ್ಲ. ಆದರೆ ಒಳ್ಳೆಯ ಕೆಲಸಗಳನ್ನು ಮಾಡಲು ಉತ್ತಮವಾದ ಮಾರ್ಗದರ್ಶನ ಅಗತ್ಯ. ಅದೇ ರೀತಿಯಾಗಿ ಒಂದು ಕ್ರೀಡಾಕೂಟವು ಯಶಸ್ಸನ್ನು ಕಾಣಬೇಕಾದರೆ ಉತ್ತಮ ಮಾರ್ಗದರ್ಶನ ಪಡೆದ ತೀರ್ಪುಗಾರರ ಅತಿ ಮುಖ್ಯ . ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನಲ್ಲಿ ಎರಡು ದಿನದವರೆಗೆ ನಡೆದಂತಹ ಹಾಕಿ ತೀರ್ಪುಗಾರರ ಕಾರ್ಯಗಾರ ತುಂಬಾ ಯಶಸ್ವಿಯಾಗಿ ನಡೆದಿದ್ದು ಉತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ಯುವಜನರಿಗೆ ಹಾಗೂ ಶಿಬಿರಾರ್ಥಿಗಳಿಗೆ ಉತ್ತಮ ರೀತಿಯ ಮಾಹಿತಿ ನೀಡಲಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದಂತಹ ಹಾಕಿ ಇಂಡಿಯಾದ ಅಂತರಾಷ್ಟ್ರೀಯ ಹಾಕಿ ಕ್ರೀಡಾಕೂಟದ ತಾಂತ್ರಿಕ ತೀರ್ಪುಗಾರರಾದ ಪುಲ್ಲಂಗಡ ರೋಹಿಣಿ ಬೋಪಣ್ಣ ಮಾತನಾಡಿ, ಯಾವುದೇ ಕೆಲಸವನ್ನು ಮಾಡುವುದಾದರೆ ಆಸಕ್ತಿಯಿಂದ ಮಾಡಬೇಕು ಆದರಲ್ಲು ಕ್ರೀಡೆಯ ತೀರ್ಪುಗಾರಿಕೆಯಲ್ಲಿ ತೀರ್ಪುಗಾರರಾಗಿ ತಂದ ಅಥವಾ ತಾಂತ್ರಿಕ ತೀರ್ಪುಗುತೀರ ಎಂಬುದನ್ನು ಸ್ವಾಹಿತಾಸಕ್ತಿಯಿಂದ ತೀರ್ಮಾನಿಸಿ ಮುಂದುವರೆದರೆ ಮಾತ್ರ ಉತ್ತಮ ತೀರ್ಪುಗಾರರಾಗಲು ಸಾಧ್ಯ ಆಸಕ್ತಿಯಿಂದ ತೀರ್ಪುಗಾರಿಕೆಯನ್ನು ನಡೆಸುತ್ತಾ ಹೋದರೆ ವಿವಿಧ ಹಂತಗಳಲ್ಲಿ ಬೆಳವಣಿಗೆ ಬೇಕಾದಂತಹ ಎಲ್ಲಾ ರೀತಿಯ ಸಹಕಾರವನ್ನು ಶಿಬಿರಾರ್ಥಿಗಳಿಗೆ ನೀಡಲಾಗುವುದು ಎಂದರು .
ವೇದಿಕೆ ಕಾರ್ಯಕ್ರಮದ ನಂತರ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ನಂತರ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಈ ಕಾರ್ಯಗಾರದಲ್ಲಿ ಒಟ್ಟು 58 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಈ ವರ್ಷ ನವಂಬರ್ ತಿಂಗಳಿನಲ್ಲಿ ಕೊಡವ ಹಾಕಿ ಅಕಾಡೆಮಿಯ ವತಿಯಿಂದ ಚಾಂಪಿಯನ್ಸ್ ಲೀಗನ್ನು ನಡೆಸಲಾಗುತ್ತಿದ್ದು ಇದಕ್ಕೂ ಮೊದಲು ಮತ್ತೊಂದು ತೀರ್ಪುಗಾರರ ಕಾರ್ಯಗಾರವನ್ನು ನಡೆಸಲಾಗುತ್ತದೆ. ಆಸಕ್ತರು, ಕ್ರೀಡಾಪಟ್ಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಗಾರವನ್ನು ಯಶಸ್ವಿಗೊಳಿಸಿಕೊಳ್ಳಬೇಕೆಂದು ವಿರಾಜಪೇಟೆ ಕೊಡವ ಹಾಕಿ ಅಕಾಡೆಮಿ ಸದಸ್ಯರು ತಿಳಿಸಿದ್ದಾರೆ .
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ರಘು ಪ್ರಸಾದ್ , ವಿರಾಜಪೇಟೆ ಕೊಡವ ಹಾಕಿ ತಾಲೂಕು ಉಪಾಧ್ಯಕ್ಷರಾದ ಮಾದಂಡ ಪೂವಯ್ಯ, ಮಡಿಕೇರಿ ಕೊಡವ ಹಾಕಿ ತಾಲೂಕು ಉಪಾಧ್ಯಕ್ಷರಾದ ಬಡಕಡ ಡೀನಾ ಪೂವಯ್ಯ, ಕಂಬೀರಂಡ ರಾಖಿ ಪೂವಣ್ಣ , ನೆರಪಂಡ ಹರ್ಷ ಮಂದಣ್ಣ , ಕುಲ್ಲಿಟೀರ ಅರುಣ್ ಬೆಬ, ಅಪ್ಪಚಟೋಲಂಡ ಅಯ್ಯಪ್ಪ, ತಮ್ಮಯ್ಯ ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.