ಮಡಿಕೇರಿ : ಚೋಕಂಡಳ್ಳಿ ನಲುವತ್ತೊಕ್ಲುವಿನ SKSSF ಘಟಕ ವತಿಯಿಂದ ಸಮಸ್ತ ಸ್ಥಾಪಕ ದಿನಾಚರಣೆ ಇತ್ತೀಚೆಗೆ ನಡೆಯಿತು. ಘಟಕ ಅಧ್ಯಕ್ಷ ರಶೀದ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಝಿಯಾಉದ್ಧೀನ್ ಬಾಖವಿ ಉದ್ಘಾಟಿಸಿದರು. ಸಂಚಾಲಕ ಜೈನುದ್ಧೀನ್ ಮಸ್ಲಿಯಾರ್ ಮುಖ್ಯ ಭಾಷಣ ಮಾಡಿದರು.
ಎಲ್ಲರೂ ಸಮಸ್ತ ಅಧೀನದಲ್ಲಿ ಕಾರ್ಯ ನಿರ್ವಹಿಸಬೇಕು. ಸಮಸ್ತ ಶತಮಾನೋತ್ಸವ ಯಶಸ್ಸಿಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸುವಂತೆ ಪ್ರಮುಖರು ಕರೆ ನೀಡಿದರು.
ಸಮಸ್ತ 100ನೇ ವಾರ್ಷಿಕ ಸಮ್ಮೇಳನ ಪ್ರಚಾರದ ಪ್ರಯುಕ್ತ ಸಿದ್ಧಪಡಿಸಲಾದ ಕೀ ಬಂಚ್ ಅನ್ನು ವಿತರಿಸಲಾಯಿತು. ಕಾರ್ಯದರ್ಶಿ ನೌಷಾದ್ ದಾರಿಮಿ, ಸಹದ್ ಫೈಝಿ ಮುಂತಾದವರಿದ್ದರು.
