ವೀರಾಜಪೇಟೆ : ಪಟ್ಟಣದ ಮೂರ್ನಾಡು ಮುಖ್ಯರಸ್ತೆಯಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನ ಲೋಕಾರ್ಪಣೆಗೊಂಡಿದ್ದು, ಇದರ ಸದ್ಬಳಕೆ ಮಾಡಿಕೊಳ್ಳುವಂತೆ ತಾಲೂಕು ತಹಸೀಲ್ದಾರ್ ಕೋರಿದ್ದಾರೆ.
ಸುಸುಜ್ಜಿತ ಕಟ್ಟಡದಲ್ಲಿ ಉತ್ತಮವಾದ ಸಭಾಂಗಣ, ಊಟಕ್ಕೆ ವಿಶಾಲವಾದ ಡೈನಿಂಗ್ ಹಾಲ್, ಕಟ್ಟಡದ ನೆಲ ಅಂತಸ್ತಿನಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ, ನೀರಿನ ಸಂಪರ್ಕ ಹೊಂದಿರುವ ಉತ್ತಮವಾದ ಅಡುಗೆ ಮನೆ, ವಧು-ವರರಿಗೆ ಪ್ರತ್ಯೇಕವಾದ ಕೊಠಡಿ ಇರುತ್ತದೆ. ಈ ಭವನವನ್ನು ಎಲ್ಲಾ ಸಭೆ ಸಮಾರಂಭಗಳಿಗೆ ಬಾಡಿಗೆಗೆ ನೀಡುತ್ತಿದ್ದು, ಸಭೆ ಸಮಾರಂಭಗಳನ್ನು ಮಾಡುವವರು ವೀರಭದ್ರಯ್ಯ 8105774952 , ವಿ.ಕೆ.ಸತೀಶ್ 9886774745 ಮತ್ತು ಮಹದೇವ 9945047981 ಭವನದ ಸಮಿತಿ ಸದಸ್ಯರನ್ನು ಸಂಪರ್ಕಿಸಬಹುದು.
