ಆಪ್ತಮಿತ್ರ ಬಳಗ ಮೂರ್ನಾಡು ವತಿಯಿಂದ ಫೆ. 1 ರಂದು ಯಕ್ಷೋತ್ಸವ

ನಾಪೋಕ್ಲು: ಆಪ್ತಮಿತ್ರ ಬಳಗದ ಸೇವಾರ್ಥವಾಗಿ ಇದೇ ಫೆ ತಾ.1. ಆದಿತ್ಯವಾರದಂದು ಮೂರ್ನಾಡಿನಲ್ಲಿ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. ಎಂದು ಆಪ್ತಮಿತ್ರ ಬಳಗ ಮೂರ್ನಾಡು ಇದರ ಆಯೋಜಕ ಚಂದ್ರಶೇಖರ್ ಕುಲಾಲ್ ಮೂರ್ನಾಡು ಅವರು ಹೇಳಿದರು. ಮೂರ್ನಾಡು ಪಟ್ಟಣದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ತೆಂಕುತಿಟ್ಟಿನ ಗಜಮೇಳವೆಂದೇ ಪ್ರಸಿದ್ಧಿ ಪಡೆದ ಇವರಿಂದ ಫೆ ತಾ.1. ರ0ದು ಮೂರ್ನಾಡಿನ ಪಾಂಡಾಣೆ ನಾಡ್ ಮಂದ್, ಶಾಲಾ ಮೈದಾನದಲ್ಲಿ ಸೇವಾರ್ಥವಾಗಿ […]
ಶಾಲಾ ಜಾಗ ಉಳಿಸಲು ಬಿಜೆಪಿ ಹೋರಾಟ ಹೊರತು ಶಾಸಕರ ವಿರುದ್ಧದ ವೈಯಕ್ತಿಕ ದ್ವೇಷವಲ್ಲ: ಅಂಬಿ ಕಾರ್ಯಪ್ಪ

ನಾಪೋಕ್ಲು: ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲೆಯ ಜಾಗ ಒತ್ತುವರಿಯಾಗಿರುವ ಬಗ್ಗೆ ,ಒತ್ತುವರಿಯಾಗಿರುವ ಜಾಗವನ್ನು ಉಳಿಸಿಕೊಳ್ಳುವ ಬಗ್ಗೆ ಭಾರತೀಯ ಜನತಾ ಪಕ್ಷವು ಹೋರಾಟ ಮಾಡುತ್ತಿದೆ ಹೊರತು ಶಾಸಕರ ತೇಜೋವಧೆ ಮಾಡುವ ಉದ್ದೇಶಕ್ಕಾಗಿ ಅಲ್ಲ ಎಂದು ಬಿಜೆಪಿ ಪಕ್ಷದ ಪರವಾಗಿ ನಾಪೋಕ್ಲು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಕ್ ಶಿವಾಚಾಳಿಯಂಡ ಅಂಬಿ ಕಾರ್ಯಪ್ಪ ಸ್ಪಷ್ಟನೆ ನೀಡಿದ್ದಾರೆ. ಪಟ್ಟಣದಲ್ಲಿ ಬಿಜೆಪಿ ಪಕ್ಷ ದಿಂದ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 1950 ರ ದಶಕದಲ್ಲಿ ಅಂದಿನ ಹಿರಿಯರ ಮತ್ತು ದಾನಿಗಳ ಪ್ರಯತ್ನದಿಂದಾಗಿ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ […]