ಡಿಜಿಟಲ್ ಪೇಮೆಂಟ್ ಮಾಡುವರಿಗೆ ಇಲ್ಲಿದೆ ನೋಡಿ ಟಿಪ್ಸ್

ಮಳಿಗೆಯಲ್ಲಿ ಶಾಪಿಂಗ್ ಮಾಡುವಾಗ, ಆನ್ ಲೈನ್ ನಲ್ಲಿ ಅಥವಾ ಪ್ರಯಾಣ ಮಾಡುವಾಗಲೇ ಇರಲಿ ಜನರು ಇಂದು ಹಣವನ್ನು ಡಿಜಿಟಲ್ ಮೂಲಕವೇ ಪಾವತಿ (Digital Payments) ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸುರಕ್ಷಿತವಾಗಿ ಮತ್ತು ಬುದ್ಧಿವಂತಿಕೆಯಿಂದ ಪಾವತಿ ಮಾಡುವುದು ಮುಖ್ಯವಾದ್ದರಿಂದ ಈ ಸಲದ ಡಿಜಿಟಲ್ ಪಾವತಿ ಜಾಗೃತಿ ಸಪ್ತಾಹ ಸಂದರ್ಭದಲ್ಲಿ ವೀಸಾ ನೀಡುತ್ತಿರುವ ಸಲಹೆಗಳು ಇಲ್ಲಿದೆ. * ಸುರಕ್ಷಿತ ಸಂಪರ್ಕರಹಿತ ಪಾವತಿಗಾಗಿ ಫೋನ್ ನಲ್ಲಿ ಕಾರ್ಡ್ ಗಳನ್ನು ಸೇವ್ ಮಾಡಿ: ಬ್ಯಾಂಕಿಂಗ್ ಮತ್ತು ಪಾವತಿ ಆಪ್ ಗಳಲ್ಲಿ ನಿಮ್ಮ ಕಾರ್ಡ್ […]
ಗೃಹಲಕ್ಷ್ಮಿ ಹಣ ಬೇಕಾದ್ರೆ ಹೀಗೆ ಮಾಡಿ: ಇಲ್ಲದಿದ್ರೆ ಬಂದ್!

ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಮಹತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಕೂಡ ಒಂದಾಗಿದೆ. ಈ ಯೋಜನೆಯಡಿ ಮನೆ ಯಜಮಾನಿ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಹಣ ಜಮಾ ಆಗುತ್ತೆ. ಇದರಿಂದ ರಾಜ್ಯಾದ್ಯಂತ ತುಂಬಾ ಮಹಿಳೆಯರಿಗೆ ಸಹಾಯವಾಗಿದ್ದು, ಉತ್ತಮ ಉದ್ದೇಶಗಳಿಗೆ ಬಳಕೆ ಮಾಡಿಕೊಂಡಿರುವ ಉದಾಹರಣೆಗಳಿವೆ. ಇದೀಗ ಈ ಹಣ ಖಾತೆಗೆ ಹಾಕಲು ಕೆಲವು ನಿಯಮಗಳನ್ನು ಮಾಡಲಾಗಿದೆ. ಈ ಗೃಹಲಕ್ಷ್ಮಿ ಯೋಜನೆಯಲ್ಲಿನ (Gruha Lakshmi scheme) ತಾಂತ್ರಿಕ ತೊಂದರೆಗಳನ್ನು ಸರಿಪಡಿಸಲಾಗಿದೆ. ಯಾರೂ ಆತಂಕಪಡಿವ ಅಗತ್ಯ ಇಲ್ಲ. ಮಹಿಳೆಯರ ಖಾತೆಗೆ […]
ಕೊಡವ ಕೂಟಾಳಿಯಡ ಕೂಟದಿಂದ ತಾತಂಡ ಜ್ಯೋತಿ ಪ್ರಕಾಶ್ಗೆ ಸನ್ಮಾನ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕೊಡವ ಕೂಟಾಳಿಯಡ ಕೂಟದಿಂದ (Kodava Kutaliyada Koota) ಬಾಸ್ಕೆಟ್ ಬಾಲ್ ಆಟಗಾರ್ತಿ ತಾತಂಡ ಜ್ಯೋತಿ ಪ್ರಕಾಶ್ (Jyoti Prakash) ಅವರನ್ನು ಸನ್ಮಾನಿಸಲಾಯಿತು. ವಿರಾಜಪೇಟೆ ಜೂನಿಯರ್ ಕಾಲೇಜ್ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುವ ಜೊತೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಾಸ್ಕೆಟ್ ಬಾಲ್ ಆಟಗಾರ್ತಿಯಾಗಿಯೂ ಗುರುತಿಸಿ ಕೊಂಡಿರುವ ತಾತಂಡ ಜ್ಯೋತಿ ಪ್ರಕಾಶ್ ಅವರ ಸಾಧನೆಯನ್ನು ಪರಿಗಣಿಸಿ ಕೊಡವ ಕೂಟಾಳಿಯಡ ಕೂಟದ ಸದಸ್ಯರು ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಅವರ ಮನೆಗೆ ತೆರಳಿ ಸನ್ಮಾನಿಸಿ ಗೌರವಿಸಿದರು. ಜ್ಯೋತಿ […]
ಭಾರತೀಯ ನೌಕಾಪಡೆಯ ಕಮಾಂಡಿಂಗ್ ಆಫೀಸರ್ ಆಗಿ ಕೊಡಗಿನ ನಿತಿನ್ ಕಾರ್ಯಪ್ಪ ನೇಮಕ

ಕೊಡಗು ಮೂಲದ ಕ್ಯಾಪ್ಟನ್ ಮಾಳೇಟಿರ ನಿತಿನ್ ಕಾರ್ಯಪ್ಪ ಭಾರತೀಯ ನೌಕಾಪಡೆಯ (Indian Navy) ಕಮಾಡಿಂಗ್ ಆಫೀಸರ್ ಆಗಿ ಕಲ್ಕತ್ತದ ಐಎನ್ಎಸ್ ನಲ್ಲಿ ನೇಮಕಗೊಂಡಿದ್ದಾರೆ. ಕ್ಯಾಪ್ಟನ್ ನಿತಿನ್ ಕಾರ್ಯಪ್ಪ ಮೈಸೂರಿನ ಸೇಂಟ್ ಜೋಸೆಫ್ ಶಾಲಾ ವಿದ್ಯಾಭ್ಯಾಸದ ನಂತರ ರಾಷ್ಟ್ರೀಯ ಭಾರತೀಯ ಸೇನಾ ಕಾಲೇಜ್ ಡೆಹರಾಡೂನ್ ನಲ್ಲಿ ತರಬೇತಿ ಹೊಂದಿ ಡಿಫೆನ್ಸ್ ಅಕಾಡೆಮಿಗೆ ಸೇರ್ಪಡೆಗೊಂಡರು. ಈ ಹಿಂದೆ ಐಎನ್ಎಸ್ ಅಜಯ್, ಐಎನ್ಎಸ್ ಕಡ್ಮಟ್ ನಲ್ಲಿ ಕಮಾಂಡರ್ ಆಗಿ ಸೇವಿಸಲಿಸಿದ್ದರು. ಇಸ್ಲಾಂಮಬಾದ್ ನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಸಲಹೆಗಾರರಾಗಿ ಕೂಡ ಸೇವೆ […]
ವಿರಾಜಪೇಟೆ ಮಲೆ ತಿರಿಕೆ ಬೆಟ್ಟದಲ್ಲಿ ಆಕಸ್ಮಿಕ ಬೆಂಕಿ: ಬೆಂಕಿ ನಂದಿಸುವಲ್ಲಿ ಯಶಸ್ವಿ

ವಿರಾಜಪೇಟೆ: ನಗರದ ಮಲೆ ತಿರಿಕೆ ಬೆಟ್ಟದಲ್ಲಿ ಸೋಮವಾರ ಮಧ್ಯಾಹ್ನ 2:30 ವೇಳೆಯಲ್ಲಿ ವ್ಯೂ ಪಾಯಿಂಟ್ ಸಮೀಪ ರಸ್ತೆ ಬದಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಸ್ಥಳೀಯ ನಿವಾಸಿಗಳು ವಿರಾಜಪೇಟೆ (Virajpet) ಪೊಲೀಸ್ ಇಲಾಖೆಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸ್ ಇಲಾಖೆ ಅಗ್ನಿಶಾಮಕ ದಳಕ್ಕೆ ಈ ಕುರಿತ ಮಾಹಿತಿಯನ್ನು ರವಾನಿಸಿದ್ದ, ಕೆಲವೇ ಕ್ಷಣದಲ್ಲಿ ಸ್ಥಳಕ್ಕೆ ಅಗ್ನಿಶಾಮಕದಳ, ಅರಣ್ಯ ಇಲಾಖೆ, ಕಂದಾಯ ಇಲಾಖೆ, ಪುರಸಭೆಯ ಸಿಬ್ಬಂದಿಗಳು ಬಂದು ಬೆಂಕಿ ನಂದಿಸುವ ಕಾರ್ಯಚರಣೆಯಲ್ಲಿ ತೊಡಗಿದರು. ಈ ಬೆಂಕಿಯ ಕೆನ್ನಾಲಿಗೆ […]
ಎಚ್ಚರಿಕೆ: ಉಚಿತ ಲ್ಯಾಪ್ಟಾಪ್ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ವಂಚನೆ!

ಆತ್ಮೀಯ ಪೋಷಕರೇ, ಕೆಲವು ದಿನಗಳಿಂದ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿ ಯು ತೇರ್ಗಡೆಗೊಂಡ ವಿದ್ಯಾರ್ಥಿಗಳ ಪೋಷಕರಿಗೆ 8867388278 (ಟ್ರೂ ಕಾಲರ್’ನಲ್ಲಿ ದೀಪ ಗೌಡ ಎಂಬ ಹೆಸರು ಬರುತ್ತಿದೆ) ಎಂಬ ಸಂಖ್ಯೆಯಿಂದ ಕರೆಗಳು ಬರುತ್ತಿದ್ದು, ತಮ್ಮ ಮಗ/ಮಗಳಿಗೆ ಎಸ್ ಎಸ್ ಎಲ್ ಸಿ/ ಪಿ ಯು ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿರುವುದರಿಂದ ಸಾಂಸಂಗ್ ಕಂಪನಿಯ ವತಿಯಿಂದ ಸುಮಾರು ರೂ ಐವತ್ತು ಸಾವಿರ ಬೆಲೆ ಬಾಳುವ ಲ್ಯಾಪ್ಟಾಪ್ (laptop) ಉಚಿತವಾಗಿ ನೀಡುತ್ತಿದ್ದು, ವಿದ್ಯಾರ್ಥಿಗಳೊಂದಿಗೆ ಪೋಷಕರು […]
ಏಷ್ಯಾದ ದೊಡ್ಡ ಸಾಹಿತ್ಯೋತ್ಸವಕ್ಕೆ ಡಾ.ರೇವತಿ ಪೂವಯ್ಯ ಆಯ್ಕೆ

ಕೇಂದ್ರ ಸಾಂಸ್ಕೃತಿಕ ಮಂತ್ರಾಲಯದ ಸಹಯೋಗದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಮಾರ್ಚ್ 7 ರಿಂದ 12ರವರೆಗೆ ನವದೆಹಲಿಯಲ್ಲಿ ಆಯೋಜಿಸಿರುವ ಸಾಹಿತ್ಯ ರಂಗದಲ್ಲೇ ಪ್ರತಿಷ್ಠಿತ ಕಾರ್ಯಕ್ರಮವಾದ ಏಷ್ಯಾದ ಅತಿದೊಡ್ಡ ಸಾಹಿತ್ಯೋತ್ಸವಕ್ಕೆ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಮುಲ್ಲೇಂಗಡ ರೇವತಿ ಪೂವಯ್ಯ (Revathi Poovaiah) ಆಯ್ಕೆಯಾಗಿದ್ದಾರೆ. ಏಷ್ಯಾದ ಬೃಹತ್ ಸಾಹಿತ್ಯೋತ್ಸವ ಖ್ಯಾತಿಯ ಈ ಕಾರ್ಯಕ್ರಮದಲ್ಲಿ ಆಹ್ವಾನಿತ ಕೊಡವ ಭಾಷಾ ಕವಯಿತ್ರಿಯಾಗಿ ಕೊಡಗನ್ನು ಇವರು ಪ್ರತಿನಿಧಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ದೇಶದ ನಾನಾ ಸಾಂಸ್ಕೃತಿಕ ವಲಯಗಳ ಅನಾವರಣವಾಗುತ್ತದೆ. ಹಲವು ದಿಗ್ಗಜ ಹಿರಿಯ ಸಾಹಿತಿಗಳು […]
ಒಣಗಿಸಲು ಇಟ್ಟಿದ್ದ ಕಾಫಿ ಕಳವು: ಆರೋಪಿಗಳ ಬಂಧನ

ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ತೋಟದ ಕಣದಲ್ಲಿ ಒಣಗಿಸಲು ಇಟ್ಟಿದ್ದ ಹಸಿ ಕಾಫಿಯನ್ನು (Coffee) ಕಳ್ಳತನ ಮಾಡಿರುವ ಎರಡು ಪ್ರತ್ಯೇಕ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಮಾಲು ಹಾಗೂ ಕೃತ್ಯಕ್ಕೆ ಬಳಸಿದ ಮೂರು ವಾಹನಗಳ ಸಮೇತ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಿತಿಮತಿ ಗ್ರಾಮದ ಶಾಂತಿನಗರದ ಕೆ. ಬಿ. ಶಫೀಕ್ (26), ಟಿ.ಜೆ. ಥೋಮಸ್ (29) ನೊಕ್ಯ ಗ್ರಾಮದ ಎಂ.ಜಿ. ಅನೀಸ್ (24) ಹಾಗೂ ಪೊನ್ನಪ್ಪ ಸಂತೆಯ ಎಂ.ಬಿ. ಯಾಸಿನ್ (28) ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 51 […]
ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಇನ್ನಿಲ್ಲ

ಮಾಜಿ ಜಿಲ್ಲಾ ಕಾಂಗ್ರೆಸ್ (Congress) ಅಧ್ಯಕ್ಷ ಕುಟ್ಟ ಗ್ರಾಮದ ನಿವಾಸಿ ಮುಕ್ಕಾಟೀರ ಶಿವು ಮಾದಪ್ಪ (49) ನಿಧನರಾಗಿದ್ದಾರೆ. ನೇರ ನುಡಿಯ ಒಬ್ಬ ನಾಯಕ, ಮಾಜಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಹಾಲಿ ಕೆಪಿಸಿಸಿ ಸದಸ್ಯರಾಗಿದ್ದ ಶಿವು ಮಾದಪ್ಪ (Shivu Madappa) ಒಬ್ಬ ಅತ್ಯುತ್ತಮ ಸಂಘಟಗಾರರಾಗಿ, ಯುವ ನಾಯಕರಾಗಿ ಗುರುತಿಸಿಕೊಂಡಿದ್ದರು. ಮುಕ್ಕಾಟಿರ ಶಿವು ಮಾದಪ್ಪ ಭಾನುವಾರ ರಾತ್ರಿ 11:00 ಸಮಯದಲ್ಲಿ ಮೈಸೂರು ಆಸ್ಪತ್ರೆಯಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ. ಮೃತರ ಅಂತಿಮ ಸಂಸ್ಕಾರ ಸೋಮವಾರ […]
ಮಡಿಕೇರಿಯಲ್ಲಿ ಗಮನ ಸೆಳೆದ ಪೊಲೀಸ್ ರನ್ ಮ್ಯಾರಾಥಾನ್

ಕರ್ನಾಟಕ ರಾಜ್ಯ ಪೊಲೀಸ್ (Police) ಇಲಾಖೆಯ ಫಿಟ್ನೆಸ್ ಫಾರ್ ಅಲ್ (Fitness for all) ಎಂಬ ಧ್ಯೇಯ ವಾಕ್ಯದೊಂದಿಗೆ ರಾಜ್ಯದಾದ್ಯಂತ ಇಂದು ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರೊಂದಿಗೆ ಮ್ಯಾರಥಾನ್ ಅನ್ನು ಆಯೋಜಿಸಲಾಗಿತ್ತು. ಈ ಕಾಯಕ್ರಮದ ಭಾಗವಾಗಿ ಕೊಡಗು ಜಿಲ್ಲಾ ಪೊಲೀಸ್ ಘಟಕದ ಆಯೋಜನೆಯಲ್ಲಿ ಡ್ರಗ್ಸ್ ಮುಕ್ತ ಕೊಡಗು ಎನ್ನುವ ಪರಿಕಲ್ಪನೆಯೊಂದಿಗೆ ನಗರದ ಫೀ.ಮಾ.ಕಾರ್ಯಪ್ಪ ವೃತ್ತದಿಂದ ಜಿಲ್ಲಾ ಪೊಲೀಸ್ ಕವಾಯತು ಮೈದಾನದವರೆಗೆ ಪೊಲೀಸ್ ರನ್ ಮ್ಯಾರಾಥಾನ್ (Police Run Marathon) ನಡೆಯಿತು. ವಿಕ್ರಮ್ ಜಾದೂಗಾರ್ ರವರಿಂದ ಮಾದಕ ದ್ರವ್ಯವನ್ನು […]