ಕೊಡಗಿನ ಭರವಸೆಯ ಪ್ರತಿಭೆ ವರ್ತ ಕಾಳಿ ಕಿರುಚಿತ್ರದ ನಿರ್ದೇಶಕ ಕೃತಾರ್ಥ ಮಂಡೆಕುಟ್ಟಂಡ

kritartha mandekuttanda

ಕೊಡಗಿನ ಹಲವಾರು ಅಪೂರ್ವ ಪ್ರತಿಭೆಗಳು ಸಿನಿಮಾ ರಂಗದಲ್ಲಿ ಹಲವಷ್ಟು ಸಾಧನೆ ಮಾಡುತ್ತಿದ್ದಾರೆ. ಅದರಲ್ಲಿ ಈಗ ಹೊಸ ಸೇರ್ಪಡೆ ಕೊಡಗಿನ ಯುವ ಪ್ರತಿಭಾನ್ವಿತ ಕೃತಾರ್ಥ್ ಮಂಡೆಕುಟ್ಟಂಡ. ‘ವರ್ತ ಕಾಳಿ’ ಎಂಬ ಕಿರು ಚಿತ್ರಕಥೆ (Short film) ಹಾಗು ನಿರ್ದೇಶನವನ್ನು ಮಾಡಿದ್ದಾರೆ ಕೃತಾರ್ಥ್ ಮಂಡೆಕುಟ್ಟಂಡ ಅವರು. ತಮ್ಮ ಸಂಪೂರ್ಣ ಪರಿಶ್ರಮವನ್ನು ಹಾಕಿ, ನಿದೇ೯ಶನದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. 14:59 ನಿಮಿಷಗಳ ಕಾಲ ಇರುವ ಕಿರು ಚಿತ್ರವು ಪ್ರತಿ ಕ್ಷಣವೂ ರಣ ರೋಚಕವಾಗಿದೆ. ಕಿರು ಚಿತ್ರವು ಪರಿಸರ ಸಂರಕ್ಷಣೆ, ಕೊಡವರಲ್ಲಿ ಇರುವ […]

ಯುಗಾದಿ, ರಂಜಾನ್ ಹಬ್ಬಕ್ಕೆ KSRTC 2 ಸಾವಿರ ವಿಶೇಷ ಬಸ್‌: ಮುಂಗಡ ಬುಕ್ಕಿಂಗ್‌ಗೆ ಡಿಸ್ಕೌಂಟ್‌

KSRTC bus

ಮಾರ್ಚ್‌ 30 ರಂದು ಚಂದ್ರಮಾನ ಯುಗಾದಿ, ಮಾರ್ಚ್‌ 31 ರಂದು ರಂಜಾನ್ ಹಬ್ಬದ ಪ್ರಯುಕ್ತ ಕೆಎಸ್‌ಆರ್‌ಟಿಸಿ (KSRTC) ವತಿಯಿಂದ 2000 ಹೆಚ್ಚುವರಿ ಬಸ್‌ಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಈ ವಿಶೇಷ ಬಸ್‌ಗಳು ಮಾರ್ಚ್‌ 28, 29 ಹಾಗೂ 30 ರಂದು ಮೂರು ದಿನ ಬೆಂಗಳೂರಿನಿಂದ ರಾಜ್ಯ, ಹೊರ ರಾಜ್ಯದ ಪ್ರಮುಖ ಸ್ಥಳಗಳಿಗೆ ಸಂಚಾರ ನಡೆಸಲಿವೆ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಪ್ರಕಟಣೆ ನೀಡಿದೆ. ಹಬ್ಬವಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನಿಂದ ಪ್ರಯಾಣಿಕರು ತಮ್ಮ ಊರುಗಳಿಗೆ ಸಂಚಾರ ನಡೆಸುತ್ತಾರೆ. ಇವರ […]