ಮುದ್ದಂಡ ಕಪ್ ಹಾಕಿ ಉತ್ಸವ: ಏ.3ರ ಹಾಕಿ ಪಂದ್ಯಾವಳಿಯ ವಿಜೇತ ತಂಡಗಳ ಮಾಹಿತಿ

Muddanda Hockey Festival

ಮೈದಾನ 1: ಕುಂದಿರ ಮತ್ತು ಪೊನ್ನಿಮಾಡ ತಂಡಗಳ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಪೊನ್ನಿಮಾಡ ತಂಡ ಗೆಲುವು ದಾಖಲಿಸಿತು. ಪೊನ್ನಿಮಾಡ ಪರ ಸಂತೋಷ್ ಪೂವಯ್ಯ ಹಾಗೂ ನಾಚಪ್ಪ ತಲಾ 1 ಗೋಲು ದಾಖಲಿಸಿದರು. ಕಾವೇರಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಚಟ್ಟಂಗಡ ಮತ್ತು ಕುಟ್ಟಂಡ (ಅಮ್ಮತ್ತಿ) ನಡುವಿನ ಪಂದ್ಯದಲ್ಲಿ ಕುಟ್ಟಂಡ ತಂಡ 3-0 ಗೋಲುಗಳ ಅಂತರದಲ್ಲಿ ಜಯಸಾಧಿಸಿತು. ಕುಟ್ಟಂಡ ತಂಡದ ರಜೀನ ಬಿದ್ದಪ್ಪ 2 ಹಾಗೂ ಸಂದೀಪ್ ಬಿದ್ದಪ್ಪ 1 ಗೋಲು ದಾಖಲಿಸಿದರು. […]

ಕೊಡಗಿನಲ್ಲಿ ಅಡ್ಡಾದಿಡ್ಡಿ ಬೈಕ್‌ ಓಡಿಸ್ತೀರಾ ಹುಷಾರು: ಸವಾರನಿಗೆ ಹಾಕಿರುವ ದಂಡವೆಷ್ಟು ಗೊತ್ತಾ?

Bike rider fined

ವಾಹನ ಸವಾರರು ಎಚ್ಚಕೆಯಿಂದ ವಾಹನ ಓಡಿಸಬೇಕು. ಏಕೆಂದರೆ ಈಗ ಪೊಲೀಸ್‌ ತಪಾಸಣೆ ಚುರುಕುಗೊಂಡಿದೆ. ಪೊಲೀಸರ ಜೊತೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ವಾಹನಗಳ ನಿಗಾ ಇಡುವ ಸಿಸ್ಟಂ ಬಂದಿದೆ. ಇದಲ್ಲದೇ ಬೇಕಾಬಿಟ್ಟಿ ವಾಹನ ಓಡಿಸುವವರಿಗೆ ಈಗ ದಂಡ ಪ್ರಮಾಣವೂ ಮೂರ್ನಾಲ್ಕು ಪಟ್ಟು ಹೆಚ್ಚಿದೆ. ಒಮ್ಮೆ ಹೀಗೆ ಏನಾದರೂ ಸಿಲುಕಿಕೊಂಡರೆ ಭಾರೀ ಪ್ರಮಾಣದಲ್ಲಿಯೇ ದಂಡ ತೆರಬೇಕಾಗುತ್ತದೆ. ಇಂತಹದ್ದೇ ಘಟನೆಯೊಂದು ಕೊಡಗಿನ ಸೋಮವಾರಪೇಟೆಯಲ್ಲಿ ವರದಿಯಾಗಿದೆ. ಹೆಲ್ಮೆಟ್ ಧರಿಸಿಲ್ಲ, ಅತಿವೇಗವಾಗಿ, ಜೋರಾಗಿ ಶಬ್ದ ಮಾಡುತ್ತಾ, ಅಜಾಗೃತೆಯಿಂದ ಬೈಕ್ ಓಡಿಸುತ್ತಿದ್ದ ಸವಾರನೊಬ್ಬನ ಪ್ರಕರಣ ಗಂಭೀರವಾಗಿ […]

Power Cut: ಕೊಡಗಿನ ಈ ಪ್ರದೇಶಗಳಲ್ಲಿ ಏ.05 ರಂದು ಕರೆಂಟ್‌ ಇರಲ್ಲ

Power Cut

ಏಪ್ರಿಲ್, 05 ರಂದು ಬೆಳಗ್ಗೆ 09 ರಿಂದ ಸಂಜೆ 5 ಗಂಟೆಯವರೆಗೆ, ವಿರಾಜಪೇಟೆ ಪಟ್ಟಣ ಸೇರಿದಂತೆ ಕಾಕೋಟುಪರಂಬು, ಕದನೂರು, ಕೆದಮುಳ್ಳೂರು, ಬೇಟೋಳಿ, ಆರ್ಜಿ, ಬಿ.ಶೆಟ್ಟಗೇರಿ, ಬಿಟ್ಟಂಗಾಲ, ಸಿದ್ದಾಪುರ, ಮಾಲ್ದಾರೆ, ಕರಡಿಗೋಡು, ಗುಹ್ಯ, ಅಮ್ಮತ್ತಿ, ಚೆಂಬೆಬೆಳ್ಳೂರು, ಮೂರ್ನಾಡು, ಮರಗೋಡು, ಹೊದ್ದೂರು, ಹಾಕತ್ತೂರು, ಹೊಸ್ಕೇರಿ, ನಾಪೋಕ್ಲು, ಕುಂಜಿಲ, ಎಮ್ಮೆಮಾಡು, ಬಲ್ಲಮಾವಟಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ (Power Cut) ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ತಿಳಿಸಿದ್ದಾರೆ.  

ಭಾರತದ ಅತೀ ವೇಗದ ಇಂಟರ್ನೆಟ್ ಪೂರೈಕೆಯಲ್ಲಿ ನಂ.1 ಕಂಪನಿ ಯಾವುದು ಗೊತ್ತೇ?

Internet

2024ರ ದ್ವಿತೀಯಾರ್ಧದಲ್ಲಿ ಜಿಯೋ (Jio) ಎಲ್ಲಾ ತಂತ್ರಜ್ಞಾನಗಳಲ್ಲಿ ಮತ್ತು ನಿರ್ದಿಷ್ಟವಾಗಿ 5 ಜಿಗಾಗಿ ಭಾರತದಲ್ಲಿ ಅತ್ಯಂತ ವೇಗದ ಮೊಬೈಲ್ ಇಂಟರ್ನೆಟ್ (Internet) ಪೂರೈಕೆದಾರನಾಗಿದೆ ಎಂದು ನೆಟ್‌ವರ್ಕ್ ಗುಪ್ತಚರ ಮತ್ತು ಸಂಪರ್ಕ ಒಳನೋಟಗಳ ವೇದಿಕೆಯಾದ ಓಕ್ಲಾ ವರದಿಯಲ್ಲಿ ಪ್ರಕಟಿಸಿದೆ. ಓಕ್ಲಾ ಪ್ರಕಾರ, ಜಿಯೋ ಸರಾಸರಿ 5 ಜಿ ಡೌನ್ಲೋಡ್ ವೇಗವನ್ನು 258.54 ಎಂಬಿಪಿಎಸ್ ಮತ್ತು ಅಪ್ಲೋಡ್ ವೇಗವನ್ನು 14.54 ಎಂಬಿಪಿಎಸ್ ದಾಖಲಿಸಿದೆ. ಅಂತೆಯೇ, ವೇಗದ ಮೊಬೈಲ್ ನೆಟ್‌ವರ್ಕ್ ಮತ್ತು ಅತ್ಯುತ್ತಮ ಮೊಬೈಲ್ ವ್ಯಾಪ್ತಿ ಎರಡರಲ್ಲೂ ಮುಂಚೂಣಿಯಲ್ಲಿದ್ದ ಜಿಯೋ ಈ […]

ಕೊಡವ ಕ್ರಿಕೆಟ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಸೀಸನ್ 02 : Day 02 – ಪ್ರಗತಿ ಕ್ರಿಕೆಟರ್ಸ್ ಮತ್ತು ಎಂಟಿಬಿ ರಾಯಲ್ಸ್‌ಗೆ ಗೆಲುವು

ಮಡಿಕೇರಿ : ಕೂರ್ಗ್ ಕ್ರಿಕೆಟ್ ಫೌಂಡೇಶನ್(coorg foundation) ವತಿಯಿಂದ ಪಾಲಿಬೆಟ್ಟದಲ್ಲಿ ನಡೆಯುತ್ತಿರುವ ಕೊಡವ ಕ್ರಿಕೆಟ್(cricket) ಲೆದರ್ ಬಾಲ್ ಪ್ರೀಮಿಯರ್ ಲೀಗ್ ಸೀಸನ್ – 02ರ ಎರಡನೇ ದಿನದ ಪಂದ್ಯದಲ್ಲಿ ಪ್ರಗತಿ ಕ್ರಿಕೆಟರ್ಸ್ ಮತ್ತು ಎಂಟಿಬಿ ರಾಯಲ್ಸ್ ತಂಡ ಗೆಲುವು ದಾಖಲಿಸಿದವು. ಪ್ರಗತಿ ಕ್ರಿಕೆಟರ್ಸ್ ಮತ್ತು ಕೂರ್ಗ್ ಯುನೈಟೆಡ್ ತಂಡಗಳ ನಡುವೆ ನಡೆದ ದಿನದ ಮೊದಲ ಪಂದ್ಯದಲ್ಲಿ ಪ್ರಗತಿ ಕ್ರಿಕೆಟರ್ಸ್ ತಂಡ ೨೦ ಓವರ್ ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೧೫೧ ರನ್ ಗಳನ್ನು ಸೇರಿಸಿತು. ಇದನ್ನು ಬೆನ್ನಟ್ಟಿದ […]

ರಾಷ್ಟ್ರ ರಾಜಧಾನಿಯಲ್ಲಿ ಲೋಕಾರ್ಪಣೆಗೊಂಡಿತು ನೂತನ ಕರ್ನಾಟಕ ಭವನ – ಇಲ್ಲಿದೆ ನೋಡಿ ವರ್ಣರಂಜಿತ ಫೋಟೋಸ್..!

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ(Delhi) ನಿನ್ನೆ ನೂತನ ಕರ್ನಾಟಕ ಭವನ(karnataka bhavan) ಲೋಕಾರ್ಪಣೆಗೊಂಡಿದೆ. ಜಗಮಗಿಸುವ ಬೆಳಕಿನ ವೈಯ್ಯಾರದಲ್ಲಿ ಕಂಗೊಳಿಸಿದ ಕರ್ನಾಟಕ ಭವನದ ಚಿತ್ರಣ ಇಲ್ಲಿದೆ ನೋಡಿ.

ಪೊಲೀಸ್ ಧ್ವಜ ದಿನಾಚರಣೆ: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಟ್ರೋಫಿ ವಿತರಣೆ

Police Flag Day Celebration

ಕೊಡಗು ಜಿಲ್ಲಾ ಪೊಲೀಸ್ ಘಟಕ ವತಿಯಿಂದ ಪೊಲೀಸ್ ಧ್ವಜ ದಿನಾಚರಣೆ (Police Flag Day Celebration) ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಟ್ರೋಫಿ ವಿತರಣಾ ಕಾರ್ಯಕ್ರಮವು ನಗರದ ಪೊಲೀಸ್ (Police) ಕವಾಯತು ಮೈದಾನದಲ್ಲಿ ಬುಧವಾರ ನಡೆಯಿತು. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಹೆಡ್‍ಕಾನ್ಸ್‍ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಎಸ್.ಸುಧೀಶ್ ಕುಮಾರ್ ಅವರಿಗೆ ಏರ್ ಮಾರ್ಷಲ್(ನಿವೃತ್ತ) ಕೆ.ಸಿ.ಕಾರ್ಯಪ್ಪ ಅವರು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ (Field Marshal K M Cariappa) ಟ್ರೋಫಿಯನ್ನು ವಿತರಿಸಿದರು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಶ್ವಾನದಳ ವಿಭಾಗದಲ್ಲಿ […]